ನಮ್ಮ ಭಾರತ ದೇಶದಲ್ಲಿ ಅನೇಕ ನಿಗೂಢವಾದ ದೇವಾಲಯಗಳಿವೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿದೆ. ತಮಿಳುನಾಡು ರಾಜ್ಯದಲ್ಲಿ ಅನೇಕ ದೇವಾಲಯಗಳಿವೆ.
ತಮಿಳುನಾಡು ಒಂದು ಅದ್ಭುತವಾದ ಪ್ರವಾಸಿ ತಾಣಗಳನ್ನು ಹೊಂದಿದೆ. ಇಲ್ಲಿಗೆ ದೇವಾಲಯಗಳೇ ತುಂಬಿವೆ ಎಂದೇ ಹೇಳಬಹುದು. ಇದೊಂದು ಆಧ್ಯಾತ್ಮಿಕವಾದ ಸ್ಥಳ. ಇಲ್ಲಿ ಕೇವಲ ದೇವಾಲಯಗಳೇ ಅಲ್ಲದೇ, ಸುಂದರವಾದ ಪ್ರದೇಶಗಳು, ಕೋಟೆಗಳು, ಉದ್ಯಾನವನಗಳು, ಹನಿಮೂನ್ಗೆ ಸೂಕ್ತವಾದ ಸ್ಥಳಗಳನ್ನು ಕೂಡ ಆನಂದಿಸಬಹುದು. ಹಾಗಾಗಿಯೇ ಈ ತಾಣಕ್ಕೆ ಹಲವಾರು ಮಂದಿ ಪ್ರವಾಸಿಗರು ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶದಿಂದಲೂ ಕೂಡ ಭೇಟಿ ನೀಡುತ್ತಿರುತ್ತಾರೆ.

1.ಚಿದಂಬರ ದೇವಾಲಯ
ಚಿದಂಬರಂ ತಮಿಳುನಾಡು ರಾಜ್ಯದಲ್ಲಿನ ಕಡಲೂರು ಜಿಲ್ಲೆಯಲ್ಲಿರುವ ಒಂದು ದೇವಾಲಯ ಪಟ್ಟಣ. ಪುರಾತನ ದ್ರಾವಿಡ ನಿರ್ಮಾಣ ಮತ್ತು ಗಂಭೀರವಾದ ಗೋಪುರದಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ. ಬೆಳಗ್ಗೆ ದೇವಾಲಯದ ಗಂಟೆಗಳ ಶಬ್ಧದಿಂದಾಗಿ ಆಧ್ಯಾತ್ಮಿಕವಾದ ಅನುಭೂತಿಯನ್ನು ಉಂಟು ಮಾಡುತ್ತದೆ.
ತಮಿಳುನಾಡು ದೇವಾಲಯ ಪಟ್ಟಣವಾದ ಚಿದಂಬರದಲ್ಲಿ ಯಾರು ಕೂಡ ಊಹೆಯೇ ಮಾಡಲಾಗದ ವಿಧವಾಗಿರುತ್ತದೆ, ಈ ಪಟ್ಟಣದ ಬಗ್ಗೆ ಅಲೋಚಿಸಿದಾಗ ಅನೇಕ ವಿಷಯ ಮನಸ್ಸಿಗೆ ಬರುತ್ತವೆ. ಆದರೆ ಮೊದಲು ಈ ಪಟ್ಟಣದಲ್ಲಿ ಪ್ರಸಿದ್ಧ ಹಾಗು ಗಂಭೀರವಾದ ಚಿದಂಬರಂ ನಟರಾಜ ದೇವಾಲಯವಿದೆ. ದೇವಾಲಯದಲ್ಲಿ ಪ್ರಧಾನವಾಗಿ ಶಿವನಿಗೆ ಪೂಜೆಯನ್ನು ಮಾಡುತ್ತಾರೆ.

2.ಮಾರ್ಗಪಂತೀಶ್ವರ ದೇವಾಲಯ
ಈ ದೇವಾಲಯದಲ್ಲಿನ ಸ್ವಾಮಿಯನ್ನು ನಾಟರ್ ಎಂದು ಕರೆಯುತ್ತಾರೆ. ಇದು 13 ನೇ ಶತಮಾನದ ದೇವಾಲಯವಾಗಿದೆ. ಈ ದೇವಾಲಯವು ವೆಲ್ಲೂರು ಜಿಲ್ಲೆಯಲ್ಲಿನ ತಿರುವಿರಿಂಜಿಯಲ್ಲಿದೆ.ಗರ್ಭಗುಡಿಯಲ್ಲಿ ರುದ್ರಾಕ್ಷಿಯನ್ನು ಸಹಜವಾಗಿ ಉದ್ಭವಿಸಿದೆ. ಇದು ದೇವಾಲಯದಲ್ಲಿ ಸಹಜವಾಗಿ ದೊಡ್ಡದಾಯಿತು ಎಂದು ಹೇಳಬಹುದು. ದೇವಾಲಯದ ಪ್ರಾಂಗಣದಲ್ಲಿ ಒಂದು ಅದ್ಭುತವಾದ ತಾಳೆ ಮರವಿದೆಯಂತೆ. ಈ ಮರವು ಬಿಳಿಯ ಬಣ್ಣವಾಗಿ ಸೂರ್ಯಾಸ್ತ ಸಮಯದಲ್ಲಿ ಮಾರ್ಪಾಟಾಗುತ್ತಿದೆ. ಉಳಿದ ಸಮಯದಲ್ಲಿ ಕಪ್ಪು ಬಣ್ಣದಲ್ಲಿರುವುದು ಅದ್ಭುತ. ಸ್ತಂಭಗಳು ಅತ್ಯಂತ ಸುಂದರವಾಗಿ ಹಾಗು ಕಲಾತ್ಮಕವಾಗಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಅದ್ಭುತವಾದ ಸೌಂದರ್ಯವನ್ನು ಕಾಣಬಹುದು. ಇಲ್ಲಿನ ರಮಣೀಯತೆಯನ್ನು ಮಾತಿನಲ್ಲಿ ವರ್ಣಿಸಲಾಗುವುದಿಲ್ಲ.

3.ಸ್ವರ್ಣ ದೇವಾಲಯ, ವೆಲ್ಲೂರ್
ಶ್ರೀ ಪುರಂ ಸ್ವರ್ಣ ದೇವಾಲಯವು ವೆಲ್ಲೂರ್ನಲ್ಲಿನ ಮಲೈಕೊಡಿ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದಾರೆ. ಇದನ್ನೇ "ದಿ ಗೋಲ್ಡ್ನ್ ಟೆಂಪಲ್ ಆಫ್ ವೆಲ್ಲೂರ್" ಎಂದು ಕರೆಯುತ್ತಾರೆ. ಈ ದೇವಾಲಯದ ಒಳಗೆ ಹಾಗು ಹೊರಗೆ 2 ಭಾಗದಲ್ಲಿಯೂ ಬಂಗಾರದ ಮಹಾಲಕ್ಷ್ಮೀ ದೇವಾಲಯವಿದೆ. ಶ್ರೀ ಪುರಂ ಸ್ವರ್ಣ ದೇವಾಲಯದಲ್ಲಿ ಕೈಯಲ್ಲಿ ಮಾಡಿದ ಬಂಗಾರದ ಶೀಟ್ಗಳನ್ನು ಬಳಸಿ ಮಾಡಿದ್ದಾರೆ. ದೇವಾಲಯವನ್ನು ಸುಮಾರು 1500 ಕೆ.ಜಿ ಬಂಗಾರದಿಂದ ನಿರ್ಮಾಣ ಮಾಡಿದ್ದಾರೆ.
ಭಕ್ತರು ದೇವಾಲಯದ ಒಳಗೆ ಪ್ರವೇಶಿಸುವ ಸಮಯದಲ್ಲಿ ಡ್ರೆಸ್ ಕೋಡ್ ತಪ್ಪದೇ ಪಾಲಿಸಲೇಬೇಕು. ಮಿಡ್ಡಿಗಳು, ಜೀನ್ಸ್ಗಳು ಪೂರ್ತಿಯಾಗಿ ನಿಷೇಧ ಮಾಡಲ್ಪಟ್ಟಿದೆ. ಕೇವಲ ಸೀರೆಗಳು, ಪಂಚೆಗಳು ಕಟ್ಟಿಕೊಂಡು ಅಥವಾ ಸಂಪ್ರದಾಯ ವಸ್ತ್ರವನ್ನು ಧರಿಸಿ ಒಳಗೆ ಹೋಗುವುದು ಉತ್ತಮ. ಮೊಬೈಲ್ ಫೋನ್ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಮದ್ಯ, ಬೆಂಕಿ ಯಾವುದು ಕೂಡ ಒಳಗೆ ತೆಗೆದುಕೊಂಡು ಹೋಗಲು ಅನುಮತಿಯನ್ನು ನೀಡುಸವುದಿಲ್ಲ.

4.ತಿರುನಲ್ಲಾರ್ ಶನೀಶ್ವರರ್ ದೇವಾಲಯ
PC:Rsmn
ದಕ್ಷಿಣ ಭಾರತದಲ್ಲಿನ ಪ್ರಸಿದ್ಧವಾದ ಶನಿ ಮಹಾತ್ಮನ ದೇವಾಲಯಗಳಲ್ಲಿ ತಿರುನಲ್ಲಾರ್ ಶನೀಶ್ವರ ದೇವಾಲಯವು ಒಂದು. ಈ ಮಹಿಮಾನ್ವಿತವಾದ ದೇವಾಲಯವು ತಮಿಳುನಾಡಿನ ಪುದುಚೆರಿಯ ಕಾರೈಕಾಲ್ ಜಿಲ್ಲೆಯಲ್ಲಿದೆ. ಈ ದೇವಾಲಯವು ವಿಜ್ಞಾನಕ್ಕೆ ಅರ್ಥವಾಗದ ಅದೆಷ್ಟು ಸಂಘಟನೆಗಳು ನಡೆದಿವೆ. ಇಲ್ಲಿನ ಶನಿ ದೇವರ ಮೂಲ ವಿಗ್ರಹವು ದ್ವಾರಪಾಲನಂತೆ ಪ್ರತಿನಿಧಿಸಲಾಗಿದೆ.


Click it and Unblock the Notifications


















