ರಮಣ ಆಶ್ರಮ ಎಂಬ ಧಾರ್ಮಿಕ ಸಂಸ್ಥೆ ನೆಲೆ ನಿಂತಿರುವುದು ರಮಣ ಮಹರ್ಷಿಗಳು ನೆಲೆಸಿದ ಸ್ಥಳದಲ್ಲಿ. ಆಧುನಿಕ ತತ್ವಜ್ಞಾನಿಯಾಗಿರುವ ರಮಣಮಹರ್ಷಿಗಳು 1922 ರಿಂದ 1950 ರವರೆಗೆ ತಿರುವಣ್ಣಾಮಲೈನಲ್ಲಿ ನೆಲೆ ನಿಂತಿದ್ದರು.
ತಿರುವಣ್ಣಾಮಲೈನ ಪಶ್ಚಿಮ ದಿಕ್ಕಿನಲ್ಲಿ ಅರುಣಾಚಲ ಬೆಟ್ಟದ ತಪ್ಪಲಿನಲ್ಲಿದೆ ಈ ರಮಣ ಆಶ್ರಮ. ಮಹರ್ಷಿ ರಮಣರು 1950ರಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದಾಗ ಅವರು ವಾಸಿಸಿದ್ದ ಸ್ಥಳದಲ್ಲಿ ಕೊನೆಯ ಕ್ಷಣಗಳನ್ನು ಮನತುಂಬಿಕೊಳ್ಳುವುದಕ್ಕೆ ಸಾವಿರಾರು ಭಕ್ತರು ಇಲ್ಲಿ ನೆರೆದಿದ್ದರು. ಅವರ ಸಾವಿನ ನಂತರವೂ ಬಹಳಷ್ಟು ಅನುಯಾಯಿಗಳು ಮತ್ತು ಕುತೂಹಲವುಳ್ಳ ಭಕ್ತರು ಆಶ್ರಮಕ್ಕೆ ಭೇಟಿ ನೀಡುತ್ತಾರೆ.
ಮರಹರ್ಷಿ ರಮಣರು ಕೊನೆಯುಸಿರೆಳೆದ ಸ್ಥಳದಲ್ಲಿ ಮಂದಿರವೊಂದನ್ನು ನಿರ್ಮಿಸಿ ಅವರಿಗೆ ಅರ್ಪಿಸಲಾಗಿದೆ. ಪ್ರತಿವರ್ಷ ಅವರ ಅನುಯಾಯಿಗಳು ಆಶ್ರಮಕ್ಕೆ ಭೆಟಿ ನೀಡಿ ಸಾಮಾಜಿಕ ಕೆಲಸಗಳನ್ನು ಮಾಡುತ್ತ ಸಮಯ ಕಳೆಯುತ್ತಾರೆ.