ತಲಕಾಡು ನೋಡಲು ಹೋಗುವ ಪ್ರವಾಸಿಗರು ಇಲ್ಲಿನ ಕೀರ್ತಿನಾರಾಯಣ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಬಹುದು. ಈ ದೇವಾಲಯವನ್ನು 1911ರಲ್ಲಿ ಉತ್ಖನನ ಮಾಡಿ ಹೊರತೆಗೆಯಲಾಯಿತು. ಈ ದೇವಾಲಯ ಹೊಯ್ಸಳರ ಅರಸ ವಿಷ್ಣುವರ್ಧನನಿಂದ ಕಟ್ಟಿಸಲ್ಪಟ್ಟಿತು. ಇಲ್ಲಿರುವ ಕೀರ್ತಿ ನಾರಾಯಣ ಮತ್ತು ರಂಗನಾಥ ಮೂರ್ತಿಗಳನ್ನು ಸ್ವತಃ ವಿಷ್ಣುವರ್ದನನೆ ಪ್ರತಿಷ್ಠಾಪಿಸಿದನಂತೆ.ಮೊದಲಿಗೆ ಇಲ್ಲಿ ಸುಂದರವಲ್ಲಿ ತಾಯರುರವರ ಸನ್ನಿಧಿ ಇಲ್ಲಿ ಇತ್ತಂತೆ, ನಂತರ ಅದರ ಸ್ಥಳದಲ್ಲಿ ಕೀರ್ತಿ ನಾರಾಯಣ ಮೂರ್ತಿ ಇರುವ ನವರಂಗ ಮಂಟಪ ಸ್ಥಾಪಿತವಾಯಿತಂತೆ. ಈ ದೇವಾಲಯವು ತನ್ನ ಆವರಣದಲ್ಲಿ ನಮ್ಮಳ್ವರ್, ರಾಮಾನುಜಾಚಾರ್ಯ ಮತ್ತು ವೇದಾಂತ ದೇಸಿಕರರ ಮೂರ್ತಿಗಳನ್ನು ಒಳಗೊಂಡಿದೆ. ದೇವಾಲಯದ ಒಳಗೆ ಆರಾಧನ ಮಂಟಪವಿದ್ದು ಅದು ವಿಶ್ವಸೇನ ಮತ್ತು ಯೋಗ ನರಸಿಂಹರ ಮೂರ್ತಿಗಳನ್ನು ಒಳಗೊಂಡಿದೆ.ಕೀರ್ತಿನಾರಾಯಣ ದೇವಾಲಯದ ಮತ್ತೊಂದು ವಿಶೇಷತೆ ಇಲ್ಲಿರುವ 9 ಅಡಿ ಎತ್ತರದ ವಿಷ್ಣು ಮೂರ್ತಿ, ಇದನ್ನು ಗರುಡ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಭಕ್ತಾದಿಗಳು ಈ ಮೂರ್ತಿ ನಾಲ್ಕು ಕೈಗಳಲ್ಲಿ ಚಕ್ರ, ಗದೆ, ಶಂಖ ಮತ್ತು ಕಮಲ ಹಿಡಿದಿರುವುದನ್ನು ಕಾಣಬಹುದು.