ಇದು ಸರ್ದಾರ್ ಸಂಗ್ರಹಾಲಯವೆಂದು ಪ್ರಸಿದ್ಧವಾಗಿದ್ದು 1889ರಲ್ಲಿ ಸ್ಥಾಪನೆಗೊಂಡಿತು. ಈ ಸಂಗ್ರಹಾಲಯದಲ್ಲಿ ಸೂರತ್ನ ಸಂಸ್ಕೃತಿಯನ್ನು ಬಿಂಬಿಸುವ ಹಲವು ವಸ್ತುಗಳನ್ನು ಸಂಗ್ರಹಿಸಲಾಗಿದೆ ಮತ್ತು ತಾರಾಲಯದಲ್ಲಿ ವಿಶ್ವದ ಬಗ್ಗೆ ಅರಿವು ಮೂಡಿಸುವ ಪ್ರದರ್ಶನಗಳನ್ನು ದಿನವೂ ಆಯೋಜಿಸಲಾಗುತ್ತದೆ.
ಈ ಜೈನ ಮಂದಿರವನ್ನು ಸಾಮ್ರಾಟ ಔರಂಗಜೇಬನ ಕಾಲದಲ್ಲಿ ಕಟ್ಟಿಸಲಾಯಿತು. ಇದರ ಹೊರಭಾಗವು ಒಳಭಾಗಕ್ಕೆ ಹೋಲಿಸಿದಾಗ ಅತ್ಯಂತ ಸರಳವಾಗಿದೆ. ಮರದ ಸ್ತಂಭಗಳಿಗೆ ತೊಲೆಗಳ ಆಧಾರವನ್ನು ನೀಡಲಾಗಿದ್ದು ಇವುಗಳನ್ನು ಚಿತ್ರಗಳಿಂದ ಅಲಂಕರಿಸಲಾಗಿದ್ದು ಇದಕ್ಕೆ ತರಕಾರಿಯ ನೈಜ ಬಣ್ಣಗಳನ್ನು ಬಳಸಲಾಗಿದೆ.
ಸೂರತ್ ಇಂದು ವಿಶ್ವದ ವಜ್ರ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ. ಪ್ರತಿ 10 ವಜ್ರಗಳಲ್ಲಿ 8 ವಜ್ರಗಳನ್ನು ಸೂರತ್ನಲ್ಲಿಯೇ ಕತ್ತರಿಸಲಾಗುತ್ತದೆ. ಇಲ್ಲಿಗೆ ವಜ್ರಗಳು ದಕ್ಷಿಣ ಆಫ್ರಕಾದಿಂದ ಬರುತ್ತವೆ. ಏಕೆಂದರೆ ಅಂತರ ರಾಷ್ಟ್ರೀಯ ವಜ್ರ ವ್ಯಾಪಾರವು ಮುಖ್ಯವಾಗಿ ಹಾಸಿಡಿಕ್ ಜ್ಯೂವ್ ಮತ್ತು ಜೈನರ ಕೈಯಲ್ಲಿದ್ದು ಇದನ್ನು ಉತ್ತರ...
ಸೂರತ್ ಬಟ್ಟೆ ಕೈಗಾರಿಕೆಗೆ ಪ್ರಸಿದ್ಧವಾದುದು. ಇಲ್ಲಿ ಅಸಂಖ್ಯ ಶ್ರೇಣಿಯ ಸೀರೆಗಳು, ಸಲ್ವಾರ್ ಕಮೀಜ್ಗಳು, ಡ್ರೆಸ್ ಪೀಸ್ಗಳು, ಪಾಲಿಯೆಸ್ಟರ್, ರೇಷ್ಮೆ, ಪ್ರಿಂಟೆಡ್ ಮತ್ತು ಎಂಬ್ರಾಯಿಡರಿ ಮೆಟೀರಿಯಲ್ಗಳು ಸಿಗುತ್ತವೆ. ಈ ಮಾರುಕಟ್ಟೆಯು ಬರ್ಡೊೆಲಿ ರಸ್ತೆಗೆ ತೆರೆದುಕೊಳ್ಳುವ ಸಹಾರ ಗೇಟಿನ ದಕ್ಷಿಣ ಭಾಗದಲ್ಲಿದೆ.
ಇವು 16ನೆಯ ಶತಮಾನದ ಬ್ರಿಟೀಷ್ ಮತ್ತು ಡಚ್ಚರ ಸಮಾಧಿಗಳು. ಇವು ಹಿಂದೂ ಮತ್ತು ಇಸ್ಲಾಮಿಕ್ ಶೈಲಿಯಿಂದ ಪ್ರಭಾವಿತವಾಗಿದೆ. ಈ ಸಮಾಧಿಗಳ ಮೇಲೆ ಶಾಸನಗಳನ್ನು ಕೂಡ ಕಾಣಬಹುದು. ಇವುಗಳನ್ನು ಐತಿಹಾಸಿಕ ಸ್ಮಾರಕಗಳೆಂದು ರಕ್ಷಿಸಲಾಗಿದ್ದು ಈ ಸ್ಥಳದಲ್ಲಿ ಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ.
1540ರಲ್ಲಿ ಸುಲ್ತಾನ ಮೊಹಮದನು ಪೋರ್ಚುಗೀಸರ ದಾಳಿಯಿಂದ ಸೂರತ್ ಪಟ್ಟಣವನ್ನು ರಕ್ಷಿಸುವ ಸಲುವಾಗಿ ತಾಪಿ ನದಿಯ ಪಕ್ಕದಲ್ಲಿ ಇದನ್ನು ಕಟ್ಟಿಸಿದನು. ಇಂದು ಈ ಕೋಟೆಯು ವಿವಿಧ ಸರ್ಕಾರಿ ಕಛೇರಿಗಳ ತಾಣವಾಗಿದೆ.
ಬರ್ದೋಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮ ಸ್ಥಳ. 1918ರಲ್ಲಿ ನಡೆದ ‘ಕರ ನಿರಾಕರಣೆ’ ಚಳುವಳಿಯ ನಾಯಕರು ಇವರು. ನಂತರದಲ್ಲಿ ಸರ್ದಾರರು ಈ ನಗರದಿಂದಲೇ ಬ್ರಿಟೀಷರು ಕಂದಾಯವನ್ನು ಹೆಚ್ಚಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ಆರಂಭಿಸಿದರು. ಗಾಂಧೀಜಿಯವರ ದಂಡಿ ಸತ್ಯಾಗ್ರಹದಲ್ಲಿ ಕೂಡ ಪಾಲ್ಗೊಂಡಿದ್ದರು. ಸ್ವರಾಜ್...
ಸೂರತ್ನಲ್ಲಿರುವ ಕೆಲವು ಪಾರ್ಸಿ ಅಗ್ನಿ ದೇವಾಲಯಗಳಲ್ಲಿ ಪಾರ್ಸಿ ಅಗೈರಿ ಮುಖ್ಯವಾದುದು. ಇಲ್ಲಿ ಪವಿತ್ರ ಅಗ್ನಿಜ್ವಾಲೆಯು ಉರಿಯುತ್ತಿದ್ದು. ಪಾರ್ಸಿಯೇತರ ಜನಾಂಗದವರು ಕೂಡ ದೇವಾಲಯದೊಳಗೆ ಹೋಗಬಹುದು.
ಇದು ಸೂರತ್ನ ಗವರ್ನರ್ ಆಗಿದ್ದ ಖ್ವಾಜ ಸಫರ್ ಸುಲೇಮನೀಮ್ನ ಸಮಾಧಿ. ಈ ಗುಮ್ಮಟವನ್ನು ಆತನ ಮಗ 1540ರಲ್ಲಿ ಕಟ್ಟಿಸಿದನು. ಇದರ ಮೇಲೆ ಪರ್ಷಿಯನ್ ವಾಸ್ತುಶೈಲಿಯ ಪ್ರಭಾವವನ್ನು ಕಾಣಬಹುದು.
ಇದು ಮೂಲಭೂತವಾಗಿ ಸರೈ ಖಾನ. ಇದನ್ನು 17ನೆಯ ಶತಮಾನದಲ್ಲಿ ಷಹಜಹಾನನು ಹಜ್ ಯಾತ್ರಿಗಳಿಗಾಗಿ ಕಟ್ಟಿಸಿದನು. 1857ರಲ್ಲಿ ಕೆಲಕಾಲ ಇದನ್ನು ಬಂಧಿಖಾನೆಯಾಗಿ ಪರಿವರ್ತಿಸಲಾಗಿತ್ತು. ಪ್ರಸ್ತುತ ಇದು ಸೂರತ್ನ ಮುನಿಸಿಪಲ್ ಕಾರ್ಪೊರೇಷನ್ನ ಕಛೇರಿಯಾಗಿದೆ.
ಗುಜರಾತಿನ ನಾಡಗೀತೆ ‘ಜೈ ಜೈ ಗಾರ್ವಿ ಗುಜರಾತ’ಯನ್ನು ಬರೆದ ಕವಿ ನರ್ಮದಶಂಕರ ಲಾಲಶಂಕರ ದಾವೆಯು ಈ ಮನೆಯಲ್ಲಿ ವಾಸವಾಗಿದ್ದರು. ಈ ಮನೆಯು ಈ ಕವಿಯ ಕೃತಿಗಳು ಮತ್ತು ಜೀವನಕ್ಕೆ ಸಂಬಧಿಸಿದ ಸ್ಮಾರಕ ಭವನ.
ರಂದೇರ್ ಸೂರತ್ ಗುಜರಾತಿನ ಮುಖ್ಯ ನಗರವಾಗುವುದಕ್ಕೆ ಮುಂಚೆ ಈ ರಾಜ್ಯದ ಮುಖ್ಯ ನಗರವಾಗಿತ್ತು. ಇದು ಈ ಪ್ರದೇಶದ ಹಳೆಯ ನಗರಗಳಲ್ಲಿ ಒಂದು. ಇಲ್ಲಿನ ಜಮಾ ಮಸೀದಿ ಅಥವ ಶುಕ್ರವಾರದ ಮಸೀದಿಯನ್ನು 16ನೆಯ ಶತಮಾನದಲ್ಲಿ ಇಲ್ಲಿದ್ದ ಜೈನ ಮಂದಿರವನ್ನು ಕೆಡವಿ ಆ ಮಂದಿರದ ಭಾಗಗಳನ್ನೇ ಬಳಸಿ ಕಟ್ಟಲಾಯಿತು.
ನವ್ಸಾರಿಯಿಂದ 25 ಕಿಮೀ ದಕ್ಷಿಣಕ್ಕೆ ಅಂಬಿಕಾ ನದಿ ದಂಡೆಯಲ್ಲಿ ಬಿಲ್ಲಿಮೊರ ಇದೆ. ಸಪುತಾರಾಗೆ ಹೋಗುವವರು ಬಿಲ್ಲಿಮೊರದ ಮೂಲಕವೇ ಸಾಗಬೇಕು. ಇದು ದಂಗ್ಸ್ ಅಡವಿಯ ಉತ್ಪನ್ನಗಳಿವೆ ಇದು ವ್ಯಾಪಾರ ಕೇಂದ್ರ.