ಪ್ರವಾಸಿಗರು ನೋಡಬೇಕಾದ ಇನ್ನೊಂದು ಸ್ಥಳವೇ 'ಕೆರೆ ಆಂಜನೇಯ ದೇವಸ್ಥಾನ'. ಇದು ಶೃಂಗೇರಿ ಮಠದ ಪಶ್ಚಿಮಕ್ಕಿದೆ. ಹನುಮ ದೇವರಿಗೆ ಸಮರ್ಪಿತ ಈ ದೇವಾಲಯ, ಶಂಕರಾಚಾರ್ಯರು ಕಟ್ಟಿಸಿದ ಏಕೈಕ ಹನುಮನ ಗುಡಿ ಎಂದೂ ನಂಬಲಾಗಿದೆ.
ಪ್ರವಾಸಿಗರು ಈ ದೇವಾಲಯವನ್ನು 27 ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ತಲುಪಬಹುದು. ತಲುಪುತಿದ್ದ ಹಾಗೆಯೇ, ಪ್ರವಾಸಿಗರು ದೈತ್ಯ ಹನುಮನ ವಿಗ್ರಹ ಹಾಗು ಶಿವ ಮತ್ತು ಗಣಪತಿಯರ ಗುಡಿಗಳನ್ನು ಕಾಣಬಹುದು. ದೇವಸ್ಥಾನದ ಒಳಗಡೆ ಸ್ಥಾಪಿತವಾಗಿರುವ ಹನುಮನ ವಿಗ್ರಹವು ಬಲಗೈಯಿಂದ ಆಶೀರ್ವದಿಸುವ ಭಂಗಿಯಲಿದ್ದು ಎಡಗೈ ನಲ್ಲಿ ತಾವರೆ ಹೂ ಹಿಡಿದಿರುವುದನ್ನು ಕಾಣಬಹುದು. ಈ ದೇವಸ್ಥಾನವು ಬಹಳವೇ ಆಕರ್ಷಕ ಮತ್ತು ಆಧ್ಯಾತ್ಮಿಕವಾಗಿದ್ದು, ಪ್ರವಾಸಿಗರು ಧ್ಯಾನಮಾಡಬಹುದು ಹಾಗು ಕುಳಿತು ವಿರಮಿಸಬಹುದು. ಈ ದೇವಸ್ಥಾನದಲ್ಲಿ ಆಚರಿಸಲಾಗುವ ಮುಖ್ಯ ಹಬ್ಬವೆಂದರೆ ಕಾರ್ತೀಕ ಕೃಷ್ಣಪಕ್ಷ ತಿಂಗಳ ಶನಿವಾರದಂದು ನಡೆಯುವ 'ದೀಪೋತ್ಸವ'.