ಗ್ವಾಲಿಯರ್ ನಿಂದ 20 ಕಿ.ಮೀ. ದೂರದಲ್ಲಿರುವ ಪಾಣಿಹಾರ ಹಿಂದೂಗಳು ಪವಿತ್ರವಾದ ನೀರಿನಲ್ಲಿ ಮಿಂದೇಳುವ ಸ್ಥಳ. ಭಕ್ತಾದಿಗಳು ಹಾಗು ದೇಶದ ನಾನಾ ಭಾಗಗಳಿಂದ ಆಗಮಿಸುವ ಯಾತ್ರಾರ್ಥಿಗಳು ಈ ಪವಿತ್ರವಾದ ತೀರ್ಥದಲ್ಲಿ ಮಿಂದು ತಮ್ಮನ್ನು ಪುನೀತರನ್ನಾಗಿ ಮಾಡಿಕೊಳ್ಳುತ್ತಾರೆ. ಇಲ್ಲಿ ಬಂದು ಸ್ನಾನ ಮಾಡುವುದು ಕೇವಲ ಬಹಿರಂಗ ಶುದ್ಧಿಗಲ್ಲದೆ ಅಂತರಂಗ ಶುದ್ಧಿಯನ್ನು ಮಾಡಲು ಇಚ್ಛಿಸುತ್ತಾರೆ. ದೇಶವಿದೇಶದ ವಿವಿಧ ಸಂಸ್ಕೃತಿಯ ಪ್ರಕಾರ, ಸ್ನಾನ ಮಾಡುವುದು ದೇಹವನ್ನು ಶುಚಿಗೊಳಿಸುವುದು ಅಷ್ಟೇ ಅಲ್ಲ, ಆತ್ಮಶುದ್ಧಿಯೂ ಕೂಡ ಒಂದು ಮೂಲ ಉದ್ದೇಶವಾಗಿದೆ. ಈ ಆಧ್ಯಾತ್ಮಿಕ ಚಿಂತನೆ ಮತ್ತು ಆತ್ಮಶುದ್ಧೀಕರಣದ ಜೊತೆಗೆ ಅನೇಕ ಯಾತ್ರಾರ್ಥಿಗಳು ಮತ್ತು ಭಕ್ತಾದಿಗಳು ಪಾಣಿಹಾರನಿಂದ ಪಛ್ರಾಯಿಗೆ ಪ್ರವಾಸ ಕೈಗೊಳ್ಳುತ್ತಾರೆ.
ಅಲ್ಲಿ ಶ್ರೀ ಶಾಂತಿನಾಥ ದಿಗಂಬರ ಜೈನ ಅತಿಶಯ ಕ್ಷೇತ್ರ ಹಾಗು ಶ್ರೀ ಪಛ್ರಾಯಿ ತೀರ್ಥ ಕ್ಷೇತ್ರವಿದೆ. ಈ ಪ್ರವಾಸ ಕೇವಲ ಆಧ್ಯಾತ್ಮಿಕವಾಗಿದೆ ಮೃಷ್ಟಾನ್ನ ಭೋಜನಕ್ಕೂ ಎಡೆಮಾಡಿಕೊಡುತ್ತದೆ. ಅಲ್ಲಿಯ ಪ್ರದೇಶ ಸಿಹಿ ತಿಂಡಿಗಳಿಗೆ ಪ್ರಸಿದ್ಧವಾಗಿದೆ. ಗ್ವಾಲಿಯರ್ ಹೊರವಲಯದಲ್ಲಿರುವ ಸಿರಸೋದ್ ಹಳ್ಳಿಯು ತನ್ನದೇ ಆದ ವಿಶಿಷ್ಟ ಬಗೆಯ ಖೀರ್ ತಯಾರಿಸುವಲ್ಲಿ ಪ್ರಸಿದ್ಧಿ ಹೊಂದಿದೆ.