ಗವಿಗಂಗಾಧರೇಶ್ವರ ಗುಹಾಂತರ ದೇವಾಲಯವು ಶಿವನ ದೇಗುಲವಾಗಿದ್ದು, ಬೆಂಗಳೂರಿನ ನಿರ್ಮಾತೃವಾದ ಕೆಂಪೆಗೌಡರಿಂದ ಕಟ್ಟಿಸಲ್ಪಟ್ಟದ್ದಾಗಿದೆ. ಈ ದೇವಾಲಯವು ಅಪರೂಪದ ಅಗ್ನಿದೇವತೆಯ ಮೂರ್ತಿಯೊಂದಿಗೆ ಇತರ 33ಮೂರ್ತಿಗಳನ್ನು ಹೊಂದಿದೆ. ಈ ದೇವಾಲಯವು ಅದ್ವಿತೀಯವಾದ ವಾಸ್ತುಕಲೆ ಮತ್ತು ಜ್ಯೋತಿಷ್ಯಶಾಸ್ತ್ರದ ಸಂಯೋಜನೆಯೊಂದಿಗೆ ನಿರ್ಮಾಣವಾಗಿದೆ. ಈ ಅನುಪಮ ಗುಹೆಯನ್ನು ಒಂದು ಏಕಶಿಲೆಯಿಂದ ಕೆತ್ತಿ ನಿರ್ಮಿಸಲಾಗಿದೆ.
ಪ್ರತಿ ವರ್ಷ ಬರುವ ಹಿಂದುಗಳ ಪ್ರಮುಖ ಹಬ್ಬ ಮಕರ ಸಂಕ್ರಾಂತಿಯಂದು ಸೂರ್ಯನ ರಶ್ಮಿಗಳು ದೇವಾಲಯವನ್ನು ಇಲ್ಲಿರುವ ಶಿವನ ವಾಹನ ನಂದಿ ವಿಗ್ರಹದಲ್ಲಿರುವ ಕೊಂಬುಗಳ ಮೂಲಕ ಹಾದು ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಬೀಳುತ್ತವೆ. ಭಕ್ತಾದಿಗಳು ಈ ಅತ್ಯದ್ಭುತ ದೃಶ್ಯ ವೈಭವವನ್ನು ಕಾಣಲು ಸಂಕ್ರಾಂತಿಯಂದು ಭಾರಿ ಸಂಖ್ಯೆಯಲ್ಲಿ ಸೇರುತ್ತಾರೆ. ಈ ದೇವಾಲಯದಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 12.30ರವರೆಗೆ ಹಾಗು ಸಂಜೆ 5 ರಿಂದ 8.30ರವರೆಗೆ ಯಾವಾಗ ಬೇಕಾದರು ದರ್ಶನ ಮಾಡಬಹುದು.