ಸಂಬಲ್ಪುರದಿಂದ 24 ಕಿಮೀ ದೂರದಲ್ಲಿ ಹತಿಬರಿಯಿದೆ. ಇಲ್ಲಿ ಪದ್ಮಶ್ರೀ ಡಾ. ಐಸಾಕ್ ಸನ್ತ್ರಾ ಅವರು ಸ್ಥಾಪಿಸಿರುವ ಕುಷ್ಠರೋಗಿಗಳ ಶುಶ್ರುಷಾ ಕೇಂದ್ರವಿದೆ. 1892ರಲ್ಲಿ ಡಾ. ಐಸಾಕ್ ಸನ್ತ್ರಾರವರು ಸಂಬಲ್ಪುರದಲ್ಲಿ ಜನಿಸಿದರು. ಕ್ರಿಶ್ಚಿಯನ್ರಾಗಿದ್ದ ಅವರನ್ನು ಅವರ ಮನೆಯವರು ಬಲಾಂಗಿರ್ನಲ್ಲಿನ ಮಿಷಿನರಿ ಸೇರುವಂತೆ ಒತ್ತಾಯಿಸಿದರು. ಕಟಕ್ನಲ್ಲಿ ಡಾಕ್ಟರ್ ಪದವಿಯನ್ನು ಪಡೆದ ನಂತರ ತಮ್ಮ ಉಳಿದ ಬದುಕನ್ನು ಅವರು ಕುಷ್ಠರೋಗದ ಉಚ್ಚಾಟನೆಗಾಗಿ ಮುಡಿಪಾಗಿಟ್ಟರು.
ಆ ಕಾಲದಲ್ಲಿ ಕುಷ್ಠರೋಗವನ್ನು ಶಾಪದಂತೆ ಪರಿಗಣಿಸಿ ಕುಷ್ಠರೋಗಿಗಳನ್ನು ಸಮಾಜವು ದೂರವಿಡುತ್ತಿತ್ತು. ಸಮಾಜದ ಈ ಧೋರಣೆಯಿಂದಾಗಿಯೇ ಹತಿಬರಿಯಲ್ಲಿ ಕುಷ್ಠರೋಗ ಶುಶ್ರುಷಾ ಕೇಂದ್ರವನ್ನು ತೆರೆದರು. ಈ ಹಳ್ಳಿಯು ದಟ್ಟಅರಣ್ಯದಿಂದ ಸುತ್ತುವರೆದಿದೆ. ಇಂದು ಹತಿಬರಿಯು ನಿಶ್ಯಬ್ದ ಪ್ರಶಾಂತ ಪ್ರಕೃತಿಯ ನಡುವೆಯಿದೆ.


Click it and Unblock the Notifications