ಮಕರ ಸಂಕ್ರಾಂತಿಯಂದು ಆಚರಿಸಲ್ಪಡುವ ಮಕರವಿಳಕ್ಕು ಶಬರಿಮಲೆಯಲ್ಲಿ ಪ್ರತಿ ವರ್ಷ ಆಚರಿಸಲ್ಪಡುವ ಅದ್ದೂರಿ ಹಬ್ಬ. ಪ್ರತಿ ವರ್ಷ ಅರ್ಧ ದಶಲಕ್ಷಕ್ಕೂ ಮಿಕ್ಕಿ ಭಕ್ತರನ್ನು ಮಕರವಿಳಕ್ಕು ಹಬ್ಬ ಆಕರ್ಷಿಸುತ್ತದೆ. ಜನವರಿ 14 ರಂದು ಮಕರವಿಳಕ್ಕು ಆಚರಿಸಲ್ಪಡುತ್ತಿದ್ದು ಆ ಶುಭದಿನದಂದು ಅಯ್ಯಪ್ಪನ ಮೂರ್ತಿ ಬೆಲೆಬಾಳುವ ವಜ್ರಾಭರಣಗಳಿಂದ ಕಂಗೊಳಿಸುತ್ತದೆ. ಮಕರವಿಳಕ್ಕು ಹಬ್ಬ ತಿರುವಾಭರಣ ಮೆರವಣಿಗೆಯೊಂದಿಗೆ ಪ್ರಾರಂಭಗೊಳ್ಳುತ್ತದೆ. ಬೆಲೆಬಾಳುವ ವಜ್ರ ವೈಢೂರ್ಯಗಳನ್ನು ಪಂದಳ ಅರಮನೆಯಿಂದ ಮೆರವಣಿಗೆಯಲ್ಲಿ ಹೊತ್ತು ತರಲಾಗುತ್ತದೆ. ಪ್ರತಿ ವರ್ಷ ಸಾವಿರಾರು ಭಕ್ತರು ಈ ಆಭರಣ ಮೆರವಣಿಗೆಯಲ್ಲಿ ಸಾಲು ಸೇರುತ್ತಾರೆ. ಈ ಅದ್ದೂರಿ ಉತ್ಸವ ಹಲವಾರು ವೈಭವ ಮತ್ತು ವಿನೋದಗಳೊಂದಿಗೆ ಮುಖ್ಯ ದೇವಸ್ಥಾನವನ್ನು ತಲುಪತ್ತದೆ. ಗುರುತಿ ಎಂಬ ಸಾಂಪ್ರದಾಯಿಕ ಹೆಸರಿನೊಂದಿಗೆ ಅಂತ್ಯವಾಗುವ ಏಳು ದಿನಗಳ ಉತ್ಸವ ಅರಣ್ಯದಲ್ಲಿರುವ ದೇವ ದೇವತೆಗಳನ್ನು ರಮಿಸಲು ಆಚರಿಸಲ್ಪಡುತ್ತದೆ. ಈ ದಿನದಂದು ಮಕರಜ್ಯೋತಿ ಎಂದು ಕರೆಯಲ್ಪಡುವ ಶುಭಕಾರಕ ಧ್ರುವ ನಕ್ಷತ್ರವೊಂದು ಆಕಾಶದಲ್ಲಿ ಗೋಚರಿಸುತ್ತದೆ. ಮಕರವಿಳಕ್ಕು ಹಬ್ಬ ಆಧ್ಯಾತ್ಮ ವಿವೇಕವನ್ನು ಜಾಗ್ರತಗೊಳಿಸುತ್ತದೆ ಮತ್ತು ಮನಸ್ಸು, ಆತ್ಮ, ದೇಹಗಳೂ ಸಂಪೂರ್ಣ ಶುದ್ದಿಗೊಂಡು ನೀವು ಮನೆಗೆ ತೆರಳುತ್ತೀರಿ.