ಅಯ್ಯಪ್ಪ ಸ್ವಾಮಿ ಪೂಜಿಸಲ್ಪಡುವ ಅಯ್ಯಪ್ಪ ದೇವಸ್ಥಾನ ಶಬರಿಮಲೆಯ ಪ್ರಮುಖ ಆಕರ್ಷಣೆ. ಪ್ರತಿವರ್ಷ ಮಾನವೀಯತೆಯ ಸಮುದ್ರವೇ ಅಯ್ಯಪ್ಪನ ಆಶಿರ್ವಾದದಲ್ಲಿ ತುಂಬಿರುತ್ತದೆ. ಅಯ್ಯಪ್ಪ ಸ್ವಾಮಿಯ ಆಶೀರ್ವಾದವೆಂದರೆ ಅದು ಭಕ್ತರ ಮಹದಾಸೆ ಮತ್ತು ಹಾರೈಕೆಗಳನ್ನು ತ್ರಪ್ತಿಕರವಾಗಿ ಪೂರ್ತಿಗೊಳಿಸಿ ಆದ್ಯಾತ್ಮಿಕ ಕೋಟೆಯನ್ನು ಬಲಪಡಿಸಿ ಭಕ್ತರ ಏಳಿಗೆಗೆ ಕಾರಣವಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಶಬರಿಮಲೆಗೆ ನವೆಂಬರ್ ನಿಂದ ಜನವರಿ ತಿಂಗಳವರೆಗೆ ಭಕ್ತರು ಬರತೊಡಗುತ್ತಾರೆ. ಈ ಸಮಯದಲ್ಲಿ ಮಂಡಲಪೂಜೆ ನಡೆಯವಾಗ ಇಡೀ ಬೆಟ್ಟವೇ ಅಯ್ಯಪ್ಪ ಸ್ವಾಮಿಯ ಮಂತ್ರಘೋಷದ ತರಂಗಗಳಿಂದ ತುಂಬಿಹೋಗಿರುತ್ತದೆ. ಪವಿತ್ರ ದೇವಸ್ಥಾನವನ್ನು ತಲುಪಲು ಭಕ್ತರು ಪರಿಶುದ್ದವಾದ 18 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಈ 18 ಮೆಟ್ಟಿಲುಗಳು ಮಾನವನ ವಿವಿಧ ನಡವಳಿಕೆಗಳನ್ನು ಪ್ರತಿನಿಧಿಸುತ್ತವೆ ಎಂಬ ನಂಬಿಕೆಯಿದೆ. ಮೊದಲ 5 ಮೆಟ್ಟಿಲುಗಳು ಮಾನವನ ವಿವೇಕವನ್ನು ಪ್ರತಿನಿಧಿಸಿದರೆ, ನಂತರದ 8 ಮೆಟ್ಟಿಲುಗಳು ಮನುಷ್ಯನ ಭಾವನೆಗಳನ್ನು ಪ್ರತಿನಿಧಿಸುತ್ತವೆ. ನಂತರದ 3 ಮೆಟ್ಟಿಲುಗಳು ಮಾನವನ ಗುಣಗಳ ಪ್ರತೀಕವಾದರೆ ಕೊನೆಯ 2 ಮೆಟ್ಟಿಲುಗಳು ಜ್ನಾನ ಮತ್ತು ಅಜ್ನಾನದ ಸಂಕೇತಗಳು. ಅಯ್ಯಪ್ಪ ದೇವಾಲಯದ ಎಡಬದಿಯಲ್ಲಿ ಮಲಿಕಾಪುರತ್ತಮ್ಮ ದೇವಿಗೆ ಅರ್ಪಿತವಾದ ಸ್ಥಳವಿದೆ. ದೇವಸ್ಥಾನದ ಆವರಣದಿಂದ ಕಾಣುವ ಪಶ್ಚಿಮ ಘಟ್ಟದ ವಿಹಂಗಮ ನೋಟದ ಹೊಳಪು ಭಕ್ತರ ಆತ್ಮವನ್ನು ಪುಳಕಿತಗೊಳಿಸುತ್ತದೆ.