ಮದ್ ಮಹೇಶ್ವರ ದೇವಾಲಯ, ಮದ್ ಮಹೇಶ್ವರ ನದಿಯ ಮೂಲದ ಹತ್ತಿರದಲ್ಲಿದೆ. ಸಮುದ್ರ ಮಟ್ಟದಿಂದ 3289 ಮೀಟರ್ ಎತ್ತರದಲ್ಲಿರುವ ಈ ದೇವಾಲಯವನ್ನು ಎರಡನೇ ಕೇದಾರ ಎಂದು ಪರಿಗಣಿಸಲಾಗಿದೆ. ಕೆಲವು ದಂತಕಥೆಗಳ ಪ್ರಕಾರ, ಶಿವ ಪಾಂಡವರನ್ನು ಕಾಣಲು ಇಷ್ಟಪಡದೇ ಅವರಿಂದ ತಪ್ಪಿಸಿಕೊಳ್ಳಲು, ಕೇದಾರ್ನಾಥ್ ನಲ್ಲಿ ತಾನೇ ಸ್ವತಃ ಮಣ್ಣಿನಲ್ಲಿ ಅಡಗಿಕೊಂಡನು. ಆದರೆ ಶಿವನ ದೇಹವು ಮದ್ ಮಹೇಶ್ವರದಲ್ಲಿ ಕಾಣಿಸಿಕೊಂಡಿತು.
ಈ ದೇವಾಲಯವನ್ನು ಚಳಿಗಾಲದ ಆರು ತಿಂಗಳ ಕಾಲ ಮುಚ್ಚಲಾಗುತ್ತದೆ ಮತ್ತು ಈ ಸಮಯದಲ್ಲಿ, ಈ ದೇವಾಲಯದಲ್ಲಿರುವ ಬೆಳ್ಳಿ ವಿಗ್ರಹಗಳನ್ನು ಉಖಿಮಠಕ್ಕೆ ವರ್ಗಾಯಿಸಲಾಗುತ್ತದೆ. ಈ ಸ್ಥಳವು, ಕಾಳಿ ದೇವಾಲಯ, ಕೇದಾರ್ನಾಥ, ಸರಸ್ವತಿ ಕುಂಡ್ ಮತ್ತು ಚೌಖಂಬಾ ನೀಲಕಂಠ ಶಿಖರಗಳಂತಹ ಹತ್ತಿರದ ಪ್ರವಾಸಿ ಆಕರ್ಷಣೀಯ ಸ್ಥಳಗಳ ವೈಭವಗಳನ್ನು ವೀಕ್ಷಿಸುವ ಅವಕಾಶವನ್ನು ಒದಗಿಸುತ್ತದೆ.


Click it and Unblock the Notifications