12 ನೇ ಶತಮಾನದಲ್ಲಿ ನಿರ್ಮಿಸಿದ ಭರತ ಮಂದಿರ ವಿಷ್ಣುವಿನ ದೇವಸ್ಥಾನವಾಗಿದ್ದು ಪುರಾತನವಾಗಿದೆ. ಹಳೆಯ ದೇವಸ್ಥಾನಗಳ ಪಟ್ಟಿಯಲ್ಲಿ ಸೇರಿಸಲಾಗಿರುವ ಭರತ ಮಂದಿರವನ್ನು ಆದಿಗುರು ಶಂಕರಾಚಾರ್ಯರು ಕಟ್ಟಿದರು. ಏಕ ಶಿಲಾ ಸಾಲಿಗ್ರಾಮದಿಂದ ವಿಷ್ಣುವಿನ ಮೂರ್ತಿಯನ್ನು ಕಡೆಯಲಾಗಿದೆ. ನೇಪಾಳದ ಗಂಡಕಿ ನದಿಯಲ್ಲಿ ಈ ಸಾಲಿಗ್ರಾಮ ಶಿಲೆ ದೊರಕುತ್ತದೆ. ಒಂಭತ್ತು ಒಳ ತ್ರಿಕೋನದ ಸುಂದರ ಶ್ರೀಯಂತ್ರವೂ ದೇವಸ್ಥಾನದ ಒಳಗಿದೆ. ಆದಿಗುರು ಶಂಕರಾಚಾರ್ಯರೇ ಈ ಶ್ರೀಯಂತ್ರವನ್ನು ಸ್ಥಾಪಿಸಿದ್ದರು. 1398 ರಲ್ಲಿ ಮುಸ್ಲಿಂ ಧಾಳಿಕೋರ ತಾಮೂರ್ ಲಂಗ್ ನಿಂದ ಈ ದೇವಸ್ಥಾನ ನಾಶವಾಗಿತ್ತು. ಆದರೆ ಮತ್ತೆ ಮೂಲ ದೇವಸ್ಥಾನದಿಂದ ಇದನ್ನು ಮರು ಸ್ಥಾಪಿಸಲಾಗಿದೆ. ಪುರಾತನ ಮೂರ್ತಿಗಳು, ನಾಣ್ಯಗಳು, ಕುಂಭಗಳು ಮತ್ತು ಶಿಲ್ಪಾಕೃತಿಗಳನ್ನು ಪುರಾತತ್ವ ಅವಲೋಕನಕಾರರು ಕಂಡು ಹುಡುಕಿದ್ದಾರೆ. ಪ್ರಸಿದ್ದ ಹಿಂದೂ ಹಬ್ಬ ಬಂಸತ ಪಂಚಮಿಯನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.


Click it and Unblock the Notifications