ರಾಮೇಶ್ವರದಲ್ಲಿರುವ ಸಾಚಿ ಹನುಮಾನ್ ದೇವಾಲಯ ಶ್ರೀ ರಾಮನಾಥಸ್ವಾಮಿ ದೇವಾಲಯದಿಂದ 3 ಕಿ. ಮೀ ದೂರದಲ್ಲಿದೆ ಮತ್ತು ಗಂಧಮಥನ ಪರ್ವತಕ್ಕೆ ಹೋಗುವ ದಾರಿಯಲ್ಲಿ ಇದೆ.
ಒಂದು ದಂತಕಥೆಯ ಪ್ರಕಾರ, ಹನುಮಂತ ರಾಮನಿಗೆ, ಸೀತಾ ಮಾತೆಯು ಲಂಕಾದಲ್ಲಿ ಇರುವ ಉತ್ತಮ ಸುದ್ದಿ ನೀಡಿದನು. ಹನುಮಂತನು ಸೀತಾ ಮಾತೆಯ ’ಚೂಡಾಮಣಿ ಅಥವಾ ಆಭರಣಗಳನ್ನು ತಂದು 'ಸಾಚಿ' ಅಥವಾ ನಿಜವಾದ ಪುರಾವೆಯ ಮೂಲಕ ಸೀತೆಯ ಬಗ್ಗೆ ಮಾಹಿತಿ ನೀಡಿದನು. ಅಲ್ಲದೇ ರಾಮನು ತನ್ನ ಪತ್ನಿ ಬದುಕಿರುವ ವಿಷಯವನ್ನು ಅರಿತುಕೊಂಡ ನಂತರ ಸಂತೋಷದಿಂದ ಕಣ್ಣೀರಿಟ್ಟನು ಎಂದು ನಂಬಲಾಗಿದೆ.
ರಾಮನು ಸೀತೆಯ ಸುದ್ದಿ ತರಲು ಬಹಳಷ್ಟು ಯಾತನೆಗಳನ್ನು ಅನುಭವಿಸಿದ ತನ್ನ ನಿಜವಾದ 'ಭಕ್ತ' ಅಥವಾ ಅನುಯಾಯಿ ಹನುಮಂತನನ್ನು ತನ್ನ ಭಕ್ತನನ್ನಾಗಿ ಈ ಸ್ಥಳದಲ್ಲಿಯೇ ಒಪ್ಪಿಕೊಂಡನು ಎಂಬುದು ಹಲವರ ಅಂಬೋಣ.
ರಾಮ ಮತ್ತು ಹನುಮಂತನ ಭಕ್ತರು ಪ್ರತಿ ವರ್ಷ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅನೇಕ ಪ್ರವಾಸಿಗರು ಗಂಧಮಥನ ಪರ್ವತಕ್ಕೆ ಹೋಗುವ ದಾರಿಯಲ್ಲಿ ಈ ದೇವಸ್ಥಾನದಲ್ಲಿ ತಮ್ಮ ಪ್ರಾರ್ಥನೆಗಳನ್ನು ಅರ್ಪಿಸಲು ಬರುತ್ತಾರೆ. ಈ ದೇವಾಲಯದಲ್ಲಿ ಹನುಮಾನ್ ಆರಾಧನೆಗೆ ಒಂದು ಮಂಗಳಕರ ದಿನವೆಂದು ಪರಿಗಣಿಸಲಾಗುವ ಮಂಗಳವಾರ, ಹಲವಾರು ಸಂಭ್ರಮದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.


Click it and Unblock the Notifications