ಅಗ್ನಿ ತೀರ್ಥಂ, ಶ್ರೀ ರಾಮನಾಥಸ್ವಾಮಿ ದೇವಾಲಯದ ಆವರಣದ ಹೊರಗೆ ನೆಲೆಗೊಂಡಿರುವ ಮೊದಲ ನೀರಿನ ಮೂಲ. ಈ ತೀರ್ಥಂ ಸಮುದ್ರದ ಒಂದು ಮೂಲೆಯಲ್ಲಿ ನೆಲೆಗೊಂಡಿದೆ. ಇತರ ತೀರ್ಥಗಳು ದೇವಸ್ಥಾನದ ಒಳಗೇ ಇದೆ.
ಒಂದು ದಂತಕಥೆಯ ಪ್ರಕಾರ, ಭಗವಾನ್ ರಾಮ, ಲಂಕಾ ರಾಜ ರಾವಣನನ್ನು ಕೊಂದ ನಂತರ ಸಮುದ್ರದ ಈ ಭಾಗದಲ್ಲಿ ಸ್ನಾನ ಮಾಡಿದ್ದನು ಎಂಬ ಪ್ರತೀತಿಯಿದೆ. ರಾಮನೂ ಕೂಡ ಸಮುದ್ರದಲ್ಲಿ ಸ್ವತಃ ಸ್ನಾನ ಮಾಡುವ ಸಂದರ್ಭದಲ್ಲಿ ಶಿವನ ಆಶೀರ್ವಾದವನ್ನು ಬೇಡಿದ್ದನು ಎಂದು ನಂಬಲಾಗಿದೆ. ಅವನು ಬ್ರಾಹ್ಮಣನನ್ನು ಕೊಂದಿದ್ದಕ್ಕಾಗಿ ಕ್ಷಮಾಪಣೆಯನ್ನು ಆಶಿಸುತ್ತಿದ್ದನು. ಈ ತೀರ್ಥದಲ್ಲಿ ಸ್ನಾನ ಮಾಡಿ ತಮ್ಮ ಐಹಿಕ ಪಾಪಗಳನ್ನು ವ್ಯಕ್ತಿಯು ತೊಳೆದುಕೊಳ್ಳಬಹುದು ಎಂಬ ನಂಬಿಕೆಗೆ ಇದೂ ಒಂದು ಕಾರಣ.
ರಾಮೇಶ್ವರದ ಕಡೆಗೆ ತೀರ್ಥಯಾತ್ರೆ ಹೋಗುವ ಪ್ರತಿ ಯಾತ್ರಿಗಳೂ ಅಗ್ನಿ ತೀರ್ಥಂ ನಲ್ಲೇ ಮೊದಲ ಸ್ನಾನದ ನಂತರ ಯಾತ್ರೆಯನ್ನು ಆರಂಭಿಸ್ತಾರೆ. ಆದರೆ, ಕೊನೆಯಲ್ಲಿ ಅನೇಕ ಜನರು ತೀರ್ಥಂ ಬಗ್ಗೆ ಮತ್ತು ಪ್ರದೇಶದ ಸ್ವಚ್ಛತೆ ಗುಣಮಟ್ಟವನ್ನು ಬಗ್ಗೆ ದೂರಲು ಪ್ರಾರಂಭಿಸಿದ್ದಾರೆ. ಯಾತ್ರಿಗಳು, ಧಾರ್ಮಿಕ ಮಹತ್ವದ ಕಾರಣ ತೀರ್ಥಂ ಬಬ್ಗೆ ಹೆಚ್ಚಿನ ಗಮನ ವಹಿಸಬೇಕೆಂದು ಬಯಸುತ್ತಾರೆ.