ಚಾಲುಕ್ಯ ಅರಸು ರಾಜರಾಜ ನರೇಂದ್ರನ ಎರಡನೇ ಪತ್ನಿ ಚಿತ್ರಾಂಗಿಯ ಹೆಸರಿನಲ್ಲಿ ನಿರ್ಮಾಣವಾದ ಚಿತ್ರಾಂಗಿ ಭವನ ರಾಜಮಂಡ್ರಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಗೋದಾವರಿ ನದಿ ತೀರದಲ್ಲಿ ಇದನ್ನು ರಾಜ ರಾಜ ನರೇಂದ್ರನು ನಿರ್ಮಿಸಿದ. ಇತಿಹಾಸದ ಪುಟಗಳಲ್ಲಿ ಈ ಭವನದ ಬಗ್ಗೆ ರಮಣೀಯವಾದ ಪುರಾಣಗಳು ಕಥೆಗಳು ಚಾಲ್ತಿಯಲ್ಲಿವೆ. ಸುತ್ತಲಿನ ಸುಂದರ ವಾತಾವರಣ ಇದರ ಮೆರಗನ್ನು ಮತ್ತಷ್ಟು ಹೆಚ್ಚಿಸಿದ್ದು, ಪ್ರಸಿದ್ಧ ಛಲಂ ನಿವಾಸವೂ ಇಲ್ಲೇ ಸಮೀಪದಲ್ಲಿದೆ. ಚಾಲ್ತಿಯಲ್ಲಿರುವ ಕಥೆಗಳ ಪ್ರಕಾರ, ಚಿತ್ರಾಂಗಿಯು ರಾಜರಾಜ ನರೇಂದ್ರನ ಮಗನ ಜೊತೆ ವಿವಾಹವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ವಿವಾಹವು ಸಫಲವಾಗದೆ, ರಾಜನೊಡನೆಯೆ ಮದುವೆಯಾಗಬೇಕಾಗಿ ಬಂದಿತು. ಇಷ್ಟಾಗಿಯು ಚಿತ್ರಾಂಗಿಯು ತನ್ನ ಶೃಂಗಾರದ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ರಾಜನ ಮಗನಾದ ಸಾರಂಗಧಾರನ ಸಾಮಿಪ್ಯವನ್ನು ಬಯಸಿದಳು. ಯುವರಾಜನಿಂದ ತನ್ನ ಬಯಕೆಗೆ ಮನ್ನಣೆ ಸಿಗದೆ ಇದ್ದಾಗ, ಸೇಡಿನ ಭಾವನೆಯಿಂದ ಯುವರಾಜನ ವಿರುದ್ಧವಾಗಿ ರಾಜನಲ್ಲಿ ಯುವರಾಜನೇ ತನ್ನ ಸಾಮಿಪ್ಯ ಬಯಸಿ ಕಿರುಕುಳ ನೀಡಿದನೆಂದು ಆಪಾದಿಸಿದಳು. ಇದರಿಂದ ತನ್ನ ಮಗನ ಮೇಲೆ ಕುಪಿತನಾದ ರಾಜನು ಶಿಕ್ಷೆಯ ರೂಪದಲ್ಲಿ ಅವನ ಎರಡೂ ಕೈಗಳನ್ನು ಕಡಿಸಿದನು. ಆಂಧ್ರಪ್ರದೇಶದ ಭೇಟಿಯ ವೇಳೆಯಲ್ಲಿ ನೀವು ನೋಡಲೇಬೇಕಾದ ಸ್ಥಳ ಇದಾಗಿದೆ.


Click it and Unblock the Notifications