ಸ್ವರ್ಗದ್ವಾರ ಪುರಿಯಲ್ಲಿ ಹಿಂದೂ ರುದ್ರಭೂಮಿಯಿದೆ. ಹೆಸರೇ ಸೂಚಿಸುವಂತೆ ಇದು ಸ್ವರ್ಗಕ್ಕೆ ದಾರಿಯೆಂದು ಹಿಂದೂಗಳು ನಂಬಿದ್ದಾರೆ. ಈ ಸ್ಥಳದ ಬಗ್ಗೆ ಹಲವಾರು ಪುರಾಣ ಕಥೆಗಳಿರುವ ಕಾರಣ ಭಾರತದೆಲ್ಲೆಡೆಯಿಂದ ಇಲ್ಲಿಗೆ ಪ್ರವಾಸಿಗಳು ಭೇಟಿ ನೀಡುತ್ತಾರೆ. ಯಾರಾದರೂ ಇಲ್ಲಿ ತನ್ನ ಕೊನೆಯುಸಿರೆಳೆದರೆ ಸಮುದ್ರವು ಅವರನ್ನು ನೇರವಾಗಿ ಸ್ವರ್ಗಕ್ಕೆ ಆಹ್ವಾನಿಸುತ್ತದೆ ಮತ್ತು ಸಂಪೂರ್ಣ ಮೋಕ್ಷ ಸಿಗುತ್ತದೆ. ಸ್ವರ್ಗದ್ವಾರ ಬೀಚ್ ನಲ್ಲಿ ಮುಕ್ತಿಗಾಗಿ ಭಕ್ತರು ಸ್ನಾನ ಮಾಡುತ್ತಾರೆ. ಪವಿತ್ರ ಬ್ರಹ್ಮಮದರು ಇದೇ ಸ್ಥಳದಿಂದ ತೇಲಿಕೊಂಡು ಹೋಗಿ ಪುರಿಗೆ ಹೋಗಿದೆ ಎನ್ನುವ ಪುರಾಣ ಕಥೆ ಪ್ರವಾಸಿಗಳನ್ನು ಆಕರ್ಷಿಸುತ್ತದೆ.


Click it and Unblock the Notifications