ಬಂಗಾಳ ಕೊಲ್ಲಿ ತೀರದಲ್ಲಿರುವ ಪುರಿ ಬೀಚ್ ಪುರಿ ರೈಲ್ವೆ ನಿಲ್ದಾಣದಿಂದ ಕೇವಲ 2 ಕಿ.ಮೀ. ದೂರದಲ್ಲಿದೆ. ಇದು ನಗರದ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಈಜಲು ಯೋಗ್ಯವಾಗಿರುವ ಇದನ್ನು ಭಾರತದ ಉತ್ತಮ ಬೀಚ್ ಎಂದು ಪರಿಗಣಿಸಲಾಗಿದೆ. ಹಿಂದೂಗಳು ಇದನ್ನು ಪವಿತ್ರ ಬೀಚ್ ಎಂದು ಪರಿಗಣಿಸುತ್ತಾರೆ.
ವಾರ್ಷಿಕವಾಗಿ ನಡೆಯುವ ಪುರಿ ಬೀಚ್ ಉತ್ಸವದ ವೇಳೆ ನಡೆಯುವ ಮರಳ ಕಲಾಕೃತಿ ಪ್ರವಾಸಿಗರನ್ನು ಸೆಳೆಯುತ್ತದೆ. ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸ್ಥಳೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರ ಕಲಾಕೃತಿಗಳನ್ನು ವೀಕ್ಷಿಸುವುದು ಕಣ್ಣಿಗೊಂದು ಹಬ್ಬ ಮತ್ತು ಉತ್ಸವದ ವೇಳೆ ಪುರಿಯಲ್ಲಿ ಖಂಡಿತವಾಗಿಯೂ ಇದನ್ನು ನೋಡಲೇಬೇಕು. ಕೊಲ್ಲಿಯೊಂದಿಗೆ ಉದ್ದವಾದ ಬೀಚ್ ನಲ್ಲಿರುವ ಚಿನ್ನದ ಮರಳು, ಹಿತವಾದ ತಂಗಾಲಿ, ಸ್ವಚ್ಛ ಮಿನುಗುವ ನೀರು ಮತ್ತು ಸೂರ್ಯೋದಯ ಮತ್ತು ಸುರ್ಯಾಸ್ತದ ರಮಣೀಯ ದೃಶ್ಯಗಳು ಬೀಚ್ ನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.