ಖಹರಾ ನದಿ ದಡದಲ್ಲಿರುವ, 450 ವರ್ಷದ ಹಳೆಯ ಗೌರಿ ಶಂಕರ್ ದೇವಸ್ಥಾನವು, ಶಿವ ಮತ್ತು ಅವನ ಪತ್ನಿ, ಪಾರ್ವತಿ ದೇವತೆಗೆ ಸಮರ್ಪಿತವಾಗಿದೆ. ಇದು ಹಿಂದೂ ಸಮುದಾಯದ ಪ್ರಮುಖ ಯಾತ್ರಾಸ್ಥಳವಾಗಿದೆ ಮತ್ತು ಪಂಡಿತ್ ಹರ್ ಪ್ರಸಾದ್ ಸೇರಿದಂತೆ ಹಲವಾರು ಅನೇಕ ಸಂತರು ಹಾಗು ವಿಶೇಷ ಜನರು ಇಲ್ಲಿಗೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತದೆ. ದೇವಾಲಯವು ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಎರಡು ದೊಡ್ಡ ಪ್ರವೇಶ ದ್ವಾರಗಳನ್ನು ಹೊಂದಿದೆ. ಈ ದ್ವಾರಗಳು 18 ನೇ ಶತಮಾನದ ಅಂತ್ಯದಲ್ಲಿ ಹಫೀಜ್ ರಹಮತ್ ಖಾನ್ ನಿಂದ ನಿರ್ಮಿಸಲ್ಪಟ್ಟಿವೆ.


Click it and Unblock the Notifications