ಹಿಂದೆ ವಿಜಯೇಶ್ವರ ದೇವಾಲಯ ಎಂದು ಕರೆಯುತ್ತಿದ್ದ ಸಂಗಮೇಶ್ವರ ದೇವಾಲಯವು ಪಟ್ಟದಕಲ್ಲು ನಗರದಲ್ಲಿರುವ ಒಂದು ಧಾರ್ಮಿಕ ಸ್ಥಳವಾಗಿದೆ. ಕ್ರಿ.ಶ.733 ರಲ್ಲಿ ಚಾಲುಕ್ಯರ ಅರಸನಾದ ವಿಜಯಾದಿತ್ಯ ಸತ್ಯಶ್ರೇಯ ಈ ದೇವಾಲಯವನ್ನು ನಿರ್ಮಿಸಿದನು. ಈ ಪ್ರದೇಶದ ಹಾಗೂ ಭಾರತದ ಅತಿ ಪುರಾತನವಾದ ದೇವಾಲಯ ಇದಾಗಿರುವುದರಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲೇಬೇಕು. ದೇವಾಲಯವು ದ್ರಾವೀಡ ಶೈಲಿಯಲ್ಲಿ ನಿರ್ಮಿತವಾಗಿದ್ದು ಒಳಭಾಗದಲ್ಲಿ ಮಾರ್ಗವೊಂದಿದೆ, ಜೊತೆಗೆ ಒಂದು ವಿಶಾಲವಾದ ಹಜಾರ ಹಾಗೂ ಪವಿತ್ರ ಸ್ಥಳವನ್ನು ಹೊಂದಿದೆ. ದೇವಾಲಯದ ಹೊರಭಾಗದ ಗೋಡೆಗಳ ಮೇಲೆ ಉಗ್ರನರಸಿಂಹ ಹಾಗೂ ನಟರಾಜನ ಸುಂದರವಾದ ಚಿತ್ರಗಳನ್ನು ಬಿಡಿಸಲಾಗಿದೆ.
ವಿರೂಪಾಕ್ಷ ದೇವಾಲಯದ ಹಜಾರ ಹಾಗೂ ಮೇಲ್ಛಾವಣಿಯ ಮಾದರಿಯಲ್ಲೇ ಈ ದೇವಾಲಯವೂ ವಿನ್ಯಾಸ ಮಾಡಲಾಗಿದೆ. ಇದು ಕಂಚಿಯ ಕೈಲಾಸನಾಥ ದೇವಾಲಯದ ಸ್ಫೂರ್ತಿಯನ್ನು ಹೊಂದಿದೆ. ಈ ಎರಡೂ ದೇವಾಲಯಗಳೂ ಅಡಿಪಾಯದಿಂದ ಹಿಡಿದು ಮೇಲಿನ ಗೋಪುರದವರೆಗೂ ಚೌಕಾಕಾರದಲ್ಲೇ ಇದೆ. ದೇವಾಲಯದ ಒಳಭಾಗದಲ್ಲಿ ಶಿವ ಹಾಗೂ ವಿಷ್ಣುವಿನ ಸುಂದರವಾದ ಶಿಲಾಕೃತಿಯನ್ನು ನಿರ್ಮಿಸಲಾಗಿದೆ. ಎತ್ತರವಾದ ಗೋಡೆಗಳ ಮೇಲೆ ಮೂಲ ವಾಸ್ತುಶಿಲ್ಪಗಳಾದ ಸಲಾಸ್(ಆಯತಾಕಾರ)ಮತ್ತು ಕರ್ಣಕುಟಾಸ್(ಚೌಕಾಕಾರ)ಆಕಾರಗಳಲ್ಲಿ ಚಿತ್ರಗಳನ್ನು ರಚಿಸಲಾಗಿದೆ.