ಕೊಡುಮನ್ ಚೈಲಂತಿಯಂಬಾಲಂ ನ್ನು ಪಥನಂತಿಟ್ಟ ನಗರದಿಂದ 16 ಕೀ.ಮಿ ಅಂತರದಲ್ಲಿ ಕಾಣಬಹುದು. ಪಥನಂತಿಟ್ಟದ ಒಂದು ಪುಟ್ಟ ಪಟ್ಟಣ, ಕುಡುಮನ್/ಕುದುಮನ್ ಎಂಬಲ್ಲಿ ಕಟ್ಟಿಸಲಾಗಿದೆ. ಈ ದೇವಾಲಯದ ಪವಿತ್ರ ದೇವತೆ ಮಹಾಲಕ್ಷ್ಮಿ ದೇವಿ. ಈ ದೇವಿಯನ್ನು ಜಾತಿ ಧರ್ಮದ ಬೇಧವಿಲ್ಲದೇ ಎಲ್ಲಾ ಧರ್ಮದ ಜನರು ಭಕ್ತಿಯಿಂದ ಪೂಜಿಸುತ್ತಾರೆ. ಈ ದೇವಾಲಯವನ್ನು ಶಕ್ತಿಭದ್ರ ಸಾಮ್ರಾಜ್ಯದ ಕೊನೆಯ ದೊರೆಯಿಂದ ಕಟ್ಟಿಸಲಾಗಿದೆ, ಕುಡುಮನ್ ಸ್ಥಳವು ಹೆಸರುವಾಸಿ ಲೇಖಕ ಅಶ್ವರ್ಯ ಚೂಡಾಮಣಿ, ಶ್ರೀ ಶಕ್ತಿ ಭದ್ರನ ಜನ್ಮ ಸ್ಥಳವೂ ಆಗಿದ್ದು ಪ್ರವಾಸಿಗರ ಅತ್ಯಂತ ನೆಚ್ಚಿನ ಸ್ಥಳ. ಕೊಡುಮನ್ ಚೈಲಂತಿಯಂಬಾಲಂ ದೇವಾಲಯದ ಆವರಣದಲ್ಲಿ ಒಂದು ಮಾಂತ್ರಿಕ ಬಾವಿಯನ್ನು ಕಾಣಬಹುದು. ಈ ಬಾವಿಯನ್ನು ’ಚೈಲಂತಿಕಿನರ್’ ಎಂದು ಕರೆಯುತ್ತಾರೆ. ಇದರ ಅರ್ಥ ’ಜೇಡರ ಬಾವಿ’ ಎಂಬುದು. ಈ ಬಾವಿಯ ನೀರು ಮಾಂತ್ರಿಕ ಶಕ್ತಿಯನ್ನು ಹೊಂದಿದ್ದು, ಯಾವುದೇ ಚರ್ಮ ವ್ಯಾಧಿಯನ್ನು ಹೊಂದಿದವರು ಈ ನೀರಿನಲ್ಲಿ ಸ್ನಾನ ಮಾಡಿದರೆ ವಾಸಿಯಾಗುತ್ತದೆ ಎನ್ನಲಾಗಿದೆ. ಹತ್ತಿರದ ಸ್ಥಳಗಳು ಹಾಗೂ ದೂರದ ಊರುಗಳಿಂದ ಚರ್ಮ ರೋಗಗಳಿಂದ ಬಳಲುತ್ತಿರುವವರು ಅದರಿಂದ ಗುಣಮುಖರಾಗಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಇಲ್ಲಿಗೆ ಧಾವಿಸುತ್ತಾರೆ.