ಮುಘಲ್ ಉದ್ಯಾನವನ್ನು ಸಾಮಾನ್ಯವಾಗಿ ಯಾದವಿಂದ್ರ ಉದ್ಯಾನ ಎಂದು ಕರೆಯಲಾಗುತ್ತದೆ, ಪರ್ವಾನೂದಿಂದ ಸುಮಾರು 10 ಕಿ.ಮೀ ದೂರದಲ್ಲಿ ಹರ್ಯಾಣ ರಾಜ್ಯದಲ್ಲಿ ಈ ಉದ್ಯಾನವಿದೆ. ಪಟಿಯಾಲಾ ರಾಜ ಮಹಾರಾಜ ಯಾದವೀಂದ್ರ ಸಿಂಗ್ರಿಂದಾಗಿ ಈ ಉದ್ಯಾನಕ್ಕೆ ಹೆಸರು ಬಂದಿದೆ. ನವಾಬ್ ಫಿದಾಯ್ ಖಾನ್ 17ನೇ ಶತಮಾನದಲ್ಲಿ ಈ ಉದ್ಯಾನದ ವಿನ್ಯಾಸವನ್ನು ಮಾಡಿದ್ದ. ಈತ ಆ ಕಾಲದ ಜನಪ್ರಿಯ ವಾಸ್ತುಶಿಲ್ಪಿ. ಪಾಕಿಸ್ತಾನದಲ್ಲಿರುವ ಬಾದ್ಶಾಯ್ ಮಸೀದಿಯನ್ನು ವಿನ್ಯಾಸ ಮಾಡಿದ್ದವನೂ ಈತನೇ ಎಂದು ಹೇಳಲಾಗಿದೆ.
ಈ ಸುಂದರ ಉದ್ಯಾನದಲ್ಲಿ ಸಣ್ಣ ಪ್ರಾಣಿ ಸಂಗ್ರಹಾಲಯ ಮತ್ತು ಈಟರಿ(ಉಪಹಾರಗೃಹ) ಕೂಡಾ ಇದೆ. ಇದರ ಹೊರತಾಗಿ ಒಂದು ಜಪಾನೀಸ್ ಉದ್ಯಾನ, ಒಂದು ನರ್ಸರಿ ಮತ್ತು ಪಿಕ್ನಿಕ್ ಲಾನ್ಗಳೂ ಇವೆ. ಉದ್ಯಾನವನ್ನು ಏಳು ಚಾವಣಿಯ ಅಡಿಯಲ್ಲಿ ನಿರ್ಮಿಸಲಾಗಿದೆ. ಸುಮಾರು 100 ಎಕರೆ ವಿಸ್ತಾರದಲ್ಲಿ ಈ ಉದ್ಯಾನವಿದ್ದು, ಪಿನ್ಜೋರ್ ಗಾರ್ಡನ್ಸ್ ಎಂದೂ ಇದನ್ನು ಕರೆಯಲಾಗುತ್ತದೆ. ಸದ್ಯ ಈ ಉದ್ಯಾನವು 1966 ರಿಂದ ಹರ್ಯಾಣಾ ಟೂರಿಸಂ ಇಲಾಖೆಯ ಅಧೀನದಲ್ಲಿದೆ. ಸಿಖ್ಖರ ಜನಪ್ರಿಯ ಹಬ್ಬ ಬೈಸಾಖಿಯ ಸಂದರ್ಭದಲ್ಲಿ ಈ ಉದ್ಯಾನದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರತಿವರ್ಷ ಜೂನ್ ಮತ್ತು ಜುಲೈನಲ್ಲಿ ಮಾವಿನ ಹಣ್ಣಿನ ಹಬ್ಬವನ್ನು ಇಲ್ಲಿ ಹಮ್ಮಿಕೊಳ್ಳಲಾಗುವುದು.