ರಾಮ ದೇವಸ್ಥಾನವು ಪೌಂಟಾ ಸಾಹಿಬ್ನ ಯಮುನಾ ಸೇತುವೆಯ ಸಮೀಪವಿರುವ ಹಿಂದೂ ಧಾರ್ಮಿಕ ಕೇಂದ್ರ. ಇದು ಇಲ್ಲಿನ ಮಾರ್ಬಲ್ ವಾಸ್ತುಶಿಲ್ಪದಿಂದಾಗಿ ಜನಪ್ರಿಯವಾಗಿದ್ದು ಕಾಂಗ್ರಾ ರಾಜನಾಗಿದ್ದ ರಾಜಾ ಪ್ರತಾಪ ಚಾಂದ್ರ ನೆನಪಿಗೆ ಅವರ ಪತ್ನಿ 1889 ರಲ್ಲಿ ನಿರ್ಮಿಸಿದ್ದಾಗಿದೆ. ಸಾಮಾನ್ಯವಾಗಿ ಇದನ್ನು ಮಂದಿರ್ ದೈ ಜಿ ಸಾಹಿಬಾ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನವು ಕಿರ್ಪಾಲ ದಾಸ್ ಗುರುದ್ವಾರ ಎಂಬ ಪ್ರತ್ಯೇಕ ವಿಭಾಗವನ್ನೂ ಹೊಂದಿದೆ. ಗುರುದ್ವಾರವು ಸಿಖ್ಖರು ಮತ್ತು ಹಿಂದೂಗಳಿಗೆ ಅತ್ಯಂತ ಪವಿತ್ರ ಧಾರ್ಮಿಕ ಸ್ಥಳವಾಗಿದೆ.