ರೇಣುಕಾ ದೇವಸ್ಥಾನವು ಹಿಮಾಚಲ ಪ್ರದೇಶದ ನಹಾನ್ನಲ್ಲಿರುವ ಅತ್ಯಂತ ಪ್ರಮುಖ ಪ್ರವಾಸಿ ತಾಣ. ಈ ದೇವಸ್ಥಾನವು ದೇವಿ ರೇಣುಕೆಗೆ ಅರ್ಪಿತವಾದದ್ದು. ರೇಣುಕಾ ಕೆರೆಯ ಸಮೀಪ ಈ ದೇವಸ್ಥಾನವಿದೆ. ಹಿಂದೂ ನಂಬಿಕೆಗಳ ಪ್ರಕಾರ, ದೇವಿ ರೇಣುಕೆಯು ಪರಶುರಾಮರ ತಾಯಿ. ತಂದೆ ಜಮದಗ್ನಿಯ ಆದೇಶವನನ್ನು ಪಾಲಿಸುವುದಕ್ಕೆ ಮಗನೇ ತಾಯಿಯನ್ನು ಕೊಲೆಗೈದ ಎಂದು ಹೇಲಲಾಗಿದೆ. ದುರ್ಗೆ ಮೇಲಿನ ಭಕ್ತಿಯಿಂದ ಇಲ್ಲಿನ ಗೂರ್ಖರು 19ನೇ ಶತಮಾನದಲ್ಲಿ ಒಂದೇ ರಾತ್ರಿಯಲ್ಲಿ ದೇವಸ್ಥಾನವನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ.
ರೇಣುಕಾ ಮೇಳವನ್ನು ಪ್ರತಿ ವರ್ಷ ನವೆಂಬರಿನಲ್ಲಿ ರೇಣುಕಾ ಕೆರೆಯ ಸಮೀಪ ನಡೆಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಹೊರತಾಗಿ ಮೇಳದಲ್ಲಿ ಸಂಗೀತ, ಬೀದಿ ಅಂಗಡಿಗಳು, ಪ್ರದರ್ಶನಗಳು, ನೃತ್ಯ ಕಾರ್ಯಕ್ರಮಗಳು ಮತ್ತು ಇತರ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಜನರು ತಮ್ಮ ಪಗಡೆಗಳನ್ನು, ಟೊಪ್ಪಿಗೆಗಳನ್ನು ಬದಲಾಯಿಸಿಕೊಳ್ಳುತ್ತಾರೆ ಮತ್ತು ಸಹೋದರತ್ವವನ್ನು ಸಾರಲು ನೀರನ್ನು ಹಂಚಿಕೊಳ್ಳುತ್ತಾರೆ.