ನಾಗಪಟ್ಟಿನಂ ಜಿಲ್ಲೆಯ ಒಂದು ನಗರಸಭೆ ವೇದಾರಣ್ಯಂ. ಇಲ್ಲಿನ ವೇದಾರಣ್ಯೇಶ್ವರರ್ ದೇವಾಲಯದಿಂದಾಗಿ ಈ ಪಟ್ಟಣ ತನ್ನ ಹೆಸರನ್ನು ಪಡೆಯಿತು. ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯವು ಚೋಳ ಸಾಮ್ರಾಜ್ಯದ ಪರಂತಕ ರಾಜನಿಂದ ನಿರ್ಮಿತವಾಗಿದೆ. ಇದಲ್ಲದೆ, ಇನ್ನೂ ಹಲವಾರು ದೇವಾಲಯಗಳನ್ನು ಈ ನಗರದಲ್ಲಿ ಕಾಣಬಹುದಾಗಿದೆ. ಇನ್ನುಳಿದಂತೆ ಇಲ್ಲಿ ಸುತ್ತಾಡಲು ಕೆಲವು ಆಕರ್ಷಣೆಗಳೂ ಸಹ ಇದ್ದು, ಅವುಗಳಲಲ್ಲಿ ಪ್ರಮುಖವಾದವುಗಳೆಂದರೆ, ಸಾಲ್ಟ್ ಸತ್ಯಾಗ್ರಹ ಸ್ಮಾರಕ ಸ್ತೂಪ, ಆಯುರ್ವೇದಿಕ್ ಗಿಡಮೂಲಿಕೆಗಳ ಕಾಡು, ಐತಿಹಾಕ ಮಹತ್ವದ ದೀಪ ಗೋಪುರ (ಲೈಟ್ ಹೌಸ್), ರಾಮರ್ ಪಾಥಂ ಮತ್ತು ಎಟ್ಟುಕುಡಿ ಮುರುಗನ್ ದೇವಾಲಯ.