ಸಣ್ಣ ತೊರೆ ರುಪಿನ್ ಗದ್ ಹಾಗು ಟಾನ್ಸ್ ನದಿಯ ಸಂಗಮ ಸ್ಥಳದಲ್ಲಿ ಕಾಣಸಿಗುವ ಒಂದು ಸಣ್ಣ ಹಳ್ಳಿ ನೇತ್ವಾರ್. ಈ ತಾಣವು, ಶಲ್ಯದ ರಾಜ ಹಾಗು ಸೂರ್ಯದೇವ ಮತ್ತು ಕುಂತಿ ಪುತ್ರನಾದ ಕರ್ಣನಿಗೆ ಅರ್ಪಿಸಲಾದ ಪುರಾತನ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ. ಸಂಪೂರ್ಣ ಉತ್ತರಾಖಂಡ ರಾಜ್ಯದ ಈ ಒಂದು ಸ್ಥಳದಲ್ಲಿ ಮಾತ್ರವೆ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಕೌರವರ ಹಿರಿಯನಾದ ದುರ್ಯೋಧನನನ್ನು ಪೂಜಿಸಲಾಗುತ್ತದೆ. ಈ ಪ್ರದೇಶದಲ್ಲಿ ಇತರೆ ಹಲವಾರು ದುರ್ಯೋಧನ ಹಾಗು ಅವನ ಸಂಗಡಿಗರಿಗೆ ಮೀಸಲಾದ ದೇವಾಲಯಗಳನ್ನು ಕಾಣಬಹುದು.