ಈ ದೇವಾಲಯವು ಉತ್ತರ ಪ್ರದೇಶದಲ್ಲಿನ ಮಹೋಬಾ ಜಿಲ್ಲೆಯ ಗೋರ್ಕ ಅಥವ ಗುಕ್ಹಾರ್ ಪರ್ವತ ಪ್ರದೇಶದ ಸಮೀಪದಲ್ಲಿದೆ. ಇಲ್ಲಿ ತಾಂಡವ ಭಂಗಿಯಲ್ಲಿ ನಿಂತಿರುವ ಶಿವನ ಬೃಹತ್ ವಿಗ್ರಹವಿದೆ. ಇದನ್ನು ಕಪ್ಪು ಗ್ರಾನೈಟ್ ಏಕ ಶಿಲೆಯಲ್ಲಿ ನಿರ್ಮಿಸಲಾಗಿದೆ. ಇದು ಗೋರ್ಕಾ ಪರ್ವತಗಳಿಂದ ಹರಿದು ಬಂದ ಹಾಲಿನಂತಹ ಕಾರಂಜಿಯಿಂದ ಸುತ್ತುವರೆದಿದೆ....
ರಾಹಿಲ ಸಾಗರದಲ್ಲಿ ಸೂರ್ಯನ ದೇವಾಲಯವಿದೆ. ಇದು 9 ನೇಯ ಶತಮಾನದಲ್ಲಿ ನಿರ್ಮಾಣವಾಗಿದ್ದು ರಾಹಿಲ ಸಾಗರದ ಪಶ್ಚಿಮ ಭಾಗದಲ್ಲಿದೆ. ಇದನ್ನು ಕ್ರಿಶ 890 ರಿಂದ 910ರವರೆಗೆ ಆಳಿದ ಚಂಡೇಲ ದೊರೆಯು ಕಟ್ಟಿಸಿದನು. ಇಂದು ಈ ದೇವಾಲಯವು ಅಂದಿನ ಪ್ರತಿಹಾರ ಶೈಲಿಗೆ ಉದಾಹರಣೆಯಾಗಿ ನಿಂತಿದೆ.
ಕಾಕರಮಠ ದೇವಾಲಯವು ಮದನ ಸಾಗರ ಸರೋವರದಲ್ಲಿನ ದ್ವೀಪದಲ್ಲಿದೆ. ಇಲ್ಲಿಗೆ ಸಮೀಪದಲ್ಲಿ ವಿಷ್ಣು ದೇವಾಲಯ ಕೂಡ ಇದೆ. ಹಿಂದೂ ಧರ್ಮದಲ್ಲಿ ನಂಬಿಕೆಯಿರುವ ನಾಥ ಪಂಥದವರ ದೇವಾಲಯವಿದು. ಈ ನಂಬಿಕೆಯನ್ನು ಹುಟ್ಟುಹಾಕಿದ್ದು ಬಾಬಾ ಗೋರಖನಾಥ. ಈತ ತನ್ನ ಅನುಯಾಯಿಗಳೊಂದಿಗೆ ಗೊಕ್ಹಾರ ಪರ್ವತದಲ್ಲಿ ಆಶ್ರಯದಾಣವನ್ನು ನಿರ್ಮಿಸಿದ....
ಚಂಡಿಕಾ ದೇವಿಯನ್ನು ಚಂಡಿ ದೇವಿ ಎಂದು ಕೂಡ ಕರೆಯುತ್ತಾರೆ. ಈಕೆ ಶಕ್ತಿ ದೇವತೆ. ಈಕೆಯನ್ನು ರಾಕ್ಷಸ ಸಂಹಾರಕಿ ಮತ್ತು ಭಕ್ತ ರಕ್ಷಕಿ ಎಂದು ಕರೆಯುತ್ತಾರೆ.ಇಲ್ಲಿ ಚಂಡಿಕಾ ದೇವಿಯ ಎರಡು ದೇವಾಲಯಗಳಿವೆ. ಒಂದನ್ನು ಛೋಟಿ ಚಂಡಿಕಾ ಎಂದೂ ಮತ್ತೊಂದನ್ನು ಬಡಿ ಚಂಡಿಕಾ ಎಂದೂ ಕರೆಯುತ್ತಾರೆ. ಇದರಲ್ಲಿ ಛೋಟಿ ಚಂಡಿಕಾ ದೇವಾಲಯವು...
ಗೋಖರ್ ಪರ್ವತವು ಬಂಡಾ ನಗರದಿಂದ 1 ಕಿಮೀ ದೂರದಲ್ಲಿ ಮತ್ತು ಮಹೋಬಾ ನಗರದಿಂದ 31ಕಿಮೀ ದೂರದಲ್ಲಿದೆ. ಇದು ಇಲ್ಲಿನ ಜನಪ್ರಿಯ ಪ್ರವಾಸಿ ತಾಣ. ಈ ಪರ್ವತದಲ್ಲಿ ಗ್ರಾನೈಟ್ ಶಿಲೆಗಳು, ಸುಂದರ ಜಲಪಾತಗಳು ಮತ್ತು ಗುರು ಗೋರಖನಾಥ ಮತ್ತು ಆತನ ಅನುಯಾಯಿಗಳು ವಾಸವಾಗಿದ್ದ ಸುಂದರ ಗುಹೆಗಳಿವೆ. ಈ ಪರ್ವತಶ್ರೇಣಿಯು ಮುಖ್ಯವಾಗಿ ಹಿಂದೂ...
ಮನೈಯ ದೇವಿಯ ದೇವಾಲಯದಲ್ಲಿ ಮನೈಯ ದೇವಿಯ ವಿಗ್ರಹವಿದೆ. ಈ ದೇವತೆ ಚಂಡೇಲ ವಂಶದ ರಕ್ಷಕ ದೇವತೆ ಎಂದು ಹೇಳಲಾಗುತ್ತದೆ. ಇದು ಮದನ ಸಾಗರ ಸರೋವರದ ದಂಡೆಯಲ್ಲಿದೆ. ಇಲ್ಲಿ ಮುಸ್ಲಿಂ ಸಂತ ಪೀರ್ ಮುಬಾರಕ್ ಷಾನ ಸ್ಮಾರಕವಿದೆ. ಈತ ಅರೇಬಿಯಾದಿಂದ ಕ್ರಿ.ಶ 1252ರಲ್ಲಿ ಇಲ್ಲಿಗೆ ಬಂದ. ಈ ದೇವಾಲಯದ ವಿಶೇಷ ಲಕ್ಷಣವೆಂದರೆ ಇಲ್ಲಿ 18 ಅಡಿ...
ಮಹೋಬಾದಲ್ಲಿನ ವಿಜಯ ಸಾಗರ ಪಕ್ಷಿ ವಿಹಾರ ಎನ್ನುವ ಪಕ್ಷಿಧಾಮವು ವಿಜಯ ಸಾಗರ ಸರೋವರದ ದಂಡೆಯಲ್ಲಿದೆ. ಇದನ್ನು ಮಧ್ಯಪ್ರದೇಶದ ವಿಜಯ ಪಾಲ ಚಂಡೇಲನು 11ನೇ ಶತಮಾನದಲ್ಲಿ ಕಟ್ಟಿಸಿದ. ಈ ಪಕ್ಷಿಧಾಮವು ನಗರದಿಂದ 5 ಕಿಮೀ ದೂರದಲ್ಲಿದ್ದು ವಿವಿಧ ಜಾತಿಯ ಪಕ್ಷಿಗಳನ್ನು ಆಕರ್ಷಿಸುತ್ತದೆ. ಇದು ನೀರಿನಾಟಗಳನ್ನು ಇಷ್ಟಪಡುವವರಿಗೆ ಮತ್ತು...