ರಾಜರಾಜೇಶ್ವರ ದೇವಸ್ಥಾನವು ಶಾಂತ ಮತ್ತು ಪ್ರಶಾಂತವಾದ ನರ್ಮದ ನದಿಯ ತೀರದಲ್ಲಿದೆ. ಮಹೇಶ್ವರದಲ್ಲಿ ಶಿವನಿಗೆ ಅರ್ಪಿತವಾಗಿರುವ ಶಿವನ ದೇವಸ್ಥಾನಗಳಲ್ಲಿ ಇದು ಒಂದು. ಈ ದೇವಾಲಯವು ಅಹಿಲೇಶ್ವರ ದೇವಾಲಯದ ಹತ್ತಿರದಲ್ಲಿದೆ. ಅಹಿಲೇಶ್ವರ ದೇವಸ್ಥಾನದಿಂದ ಈ ದೇವಾಲಯಕ್ಕೆ ಬರಲು ಸುಂದರವಾದ ಕಲ್ಲು ದಾರಿ ಇದೆ. ರಾಜರಾಜೇಶ್ವರ ದೇವಾಲಯದಿಂದ ಯಾರಾದರೂ ನರ್ಮದ ನದಿಯ ಘಾಟದ ಹತ್ತಿರ ಶಿವಲಿಂಗಗಳನ್ನು ನಂದಿ ಪ್ರತಿಮೆಗಳನ್ನು ನೋಡಬಹುದು.
ಈ ಭವ್ಯವಾದ ದೇವಸ್ಥಾನಕ್ಕೆ ಪ್ರತಿವರ್ಷವು ಸಾವಿರಾರು ಭಕ್ತರು ಇಲ್ಲಿಯ ದೇವರ ಆಶಿರ್ವಾದವನ್ನು ಪಡೆಯಲು ಭೇಟಿಯನ್ನು ನೀಡುತ್ತಾರೆ. ಈ ದೇವಾಲಯವು ಹನ್ನೊಂದು ಅನಂತ ದ್ವೀಪಗಳು ಅಥವಾ ಅಖಂಡ ಜ್ಯೋತಿಗೆ ಹೆಸರುವಾಸಿಯಾಗಿದೆ. ಹನ್ನೊಂದು ಅನಂತ ದೀಪವುಳ್ಳ ಈ ಅಖಂಡ ಜ್ಯೋತಿಯನ್ನು ಉರಿಸುವಂತಿಲ್ಲ. ಇದು ಶಾಶ್ವತವಾಗಿ ಬೆಳಗಲು ಯತೇಚ್ಛವಾಗಿ ಪವಿತ್ರವಾದ ತುಪ್ಪವನ್ನು ಈ ಅಖಂಡ ಜ್ಯೋತಿ ದೀಪಕ್ಕೆ ಸುರಿದಿರುತ್ತಾರೆ.
ಮಹೇಶ್ವರದ ಬೇರೆ ದೇವಸ್ಥಾನಗಳಂತೆ ಈ ದೇವಸ್ಥಾನವು ಕೂಡ ಗೋಡೆಗಳ ಮೇಲೆ ಅಧ್ಭುತವಾದ ವಾಸ್ತು ಶಿಲ್ಪ ವಿನ್ಯಾಸಗಳನ್ನು ಹೊಂದಿದೆ. ಗರ್ಭಗುಡಿಯ ಒಳಗಡೆ ಸುಂದರವಾದ ಬಹು ಪಾಶ್ರ್ವ ಕನ್ನಡಿಗಳಿಂದ ಅಲಂಕರಿಸಲಾಗಿದೆ