ಪಂಡ್ರಿನಾಥ ದೇವಸ್ಥಾನವು ಮಹೇಶ್ವರದ ಪ್ರಮುಖ ದೇವಾಲಯಗಳಲ್ಲಿ ಒಂದು. ಇದು ಬೇರೆ ದೇವಾಲಯಗಳಂತೆ ಅಲ್ಲದೇ, ಈ ದೇವಾಲಯವು ಭಗವಾನ ವಿಷ್ಣುವಿಗೆ ಅರ್ಪಿತವಾಗಿದೆ. ಸ್ಥಳೀಯ ನಂಬಿಕೆಗಳ ಪ್ರಕಾರ ಶ್ರೀಕೃಷ್ಣನು ಹಿಂದುಗಳ ಪವಿತ್ರ ಮಾಸವಾದ ಶ್ರಾವಣದ ಹುಣ್ಣಿಮೆಯ ಎಂಟನೇ ದಿನದಂದು (ಕೃಷ್ಣ ಪಕ್ಷ) ಪಂಡ್ರಿನಾಥನಾಗಿ ಅವತಾರ ಹೊಂದಿದನು. ಇದು ದ್ವಾಪರ ಯುಗದ ಅಂತ್ಯದಲ್ಲಿ ಸಂಭವಿಸಿತು.
ಭಗವಾನ ವಿಷ್ಣುವನ್ನು ಪಂಡ್ರಿನಾಥ ಮತ್ತು ವಿಠ್ಠಲನ ರೂಪದಲ್ಲಿ ಆರಾಧಿಸಲಾಗುತ್ತದೆ. ಈ ಕುರಿತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಕ್ರಿ.ಶ 13 ನೇ ಶತಮಾನದಿಂದ ಹಿಡಿದು 17 ನೇ ಶತಮಾನದವರೆಗಿನ ಅವಧಿಯಲ್ಲಿ ವಾಸವಾಗಿದ್ದ ಪ್ರಸಿದ್ಧ ವೈಷ್ಣವ ಸಂತರಿಂದ ಪಂಡ್ರಿನಾಥ ಮತ್ತು ವಿಠಲ ದೇವರ ಆರಾಧನೆ ತೀವ್ರಗೊಂಡಿತು. ಇವರು ತಮ್ಮ ಪದ್ಯಗಳು ಮತ್ತು ಕೀರ್ತನೆಗಳ ಮೂಲಕ ಸಾಮಾನ್ಯ ಜನತೆಗೆ ಭೋದನೆಯನ್ನು ಮಾಡಿದರು.
ಪಂಡ್ರಿನಾಥ ದೇವಾಲಯವು ಪುರಾಣಗಳಲ್ಲಿ ಉಲ್ಲೇಖಿತವಾಗಿರುವ ವಿಗ್ರಹಗಳ ಸಂಕೀರ್ಣ ಕೆತ್ತನೆಗಳಿಂದ ಅಲಂಕೃತಗೊಂಡಿದೆ. ದೇವಾಲಯದ ಇಳಿ ಬಿದ್ದಿರುವ ಬಾಲ್ಕನಿಯಲ್ಲಿ ಸಹ ಸೊಗಸಾದ ಕೆತ್ತನೆಗಳನ್ನು ನೋಡಬಹುದು. ಈ ದೇವಾಲಯದ ಬಾಗಿಲಿನ ಮೇಲೆ ಅಧ್ಬುತವಾದ ಕಲಾಕೃತಿಗಳನ್ನು ಕಾಣುತ್ತೇವೆ. ಇದು ಕಿರು ಚಿತ್ರಗಳ (ಚಿಕಣಿ ಚಿತ್ರಗಳು) ಕೆತ್ತನೆಗಳನ್ನು ಹೊಂದಿದೆ.