ಇದು ಬುದ್ಧನ ಜೀವನ ಶೈಲಿಯ ಬಗ್ಗೆ ತಿಳಿಸುವ ಸಂಗ್ರಹಾಲಯವಾಗಿರುವುದರಿಂದ ಇದನ್ನು ಬುದ್ಧ ಸಂಗ್ರಹಾಲಯ ಎಂದು ಕರೆಯುತ್ತಾರೆ. 1992 - 93 ರಲ್ಲಿ ಕುಶಿನಗರ ಮ್ಯೂಸಿಯಂ ಅನ್ನು ನಿರ್ಮಿಸಲಾಯಿತು. ಈ ನಗರ ಕೇವಲ ಬುದ್ಧನ ಭೇಟಿ ಮತ್ತು ಧರ್ಮೊಪದೇಶದ ಬಗ್ಗೆ ಮಾತ್ರವಲ್ಲ ಬುದ್ಧ ತನ್ನ ಮರ್ತ್ಯ ದೇಹ ತ್ಯಜಿಸಿ ಮಹಾಪರಿನಿರ್ವಾಣ ಸೇರಿದ ಅಂಶವನ್ನು ಕೂಡ ಸಂಗ್ರಹಿಸಿದೆ.
ಈ ಮ್ಯೂಸಿಯಂ ನಗರದ ಬಸ್ ನಿಲ್ದಾಣದಿಂದ ಆಗ್ನೇಯ ಭಾಗಕ್ಕೆ 1 ಕಿ ಮೀ ಅಂತರದಲ್ಲಿದೆ. ಮಹಾಪರಿನಿರ್ವಾಣ ದೇವಾಲಯದಿಂದ ಅರ್ಧ ಕಿ.ಮೀ ಮತ್ತು ಕಸಿಯ ಬಸ್ಸು ನಿಲ್ದಾಣದಿಂದ 3 ಕಿ ಮೀ ಅಂತರದಲ್ಲಿದೆ. ಕೇಂದ್ರ ಭಾಗದಲ್ಲಿರುವುದರಿಂದ ಯಾತ್ರಿಕರಿಗೆ ಮತ್ತು ಪ್ರವಾಸಿಗರಿಗೆ ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ.
ಕುಶಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ಪುರಾತತ್ವ ಪ್ರದರ್ಶನಗಳ ಅಮೂಲ್ಯ ಸಂಪತ್ತು, ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಈ ಸಂಗ್ರಹಾಲಯವು ತಿಳಿಸುತ್ತದೆ. ಈ ಸಂಗ್ರಹಾಲಯ ಪ್ರಾಥಮಿಕವಾದ 248 ಪ್ರದರ್ಶನಗಳನ್ನು ಒಳಗೊಂಡಿದೆ. ಜೊತೆಗೆ ಟೆರಾಕೋಟಾದ ವಿಶೇಷ ವಸ್ತುಗಳಾದ ಬುದ್ಧನ ಪ್ರತಿಮೆಗಳು, ಶಿಲ್ಪಕಲೆಗಳು, ಆ ಕಾಲದ ಕಂಚಿನ ಪ್ರತಿಮೆಗಳು, ಬ್ಯಾನರ್ ವರ್ಣಚಿತ್ರಗಳು ಅಥವಾ ತಂಕಾ, ಜೇಡಿಮಣ್ಣಿನ ಮುದ್ರೆಗಳು, ನಾಣ್ಯಗಳು, ಇಟ್ಟಿಗೆಗಳನ್ನು ಮತ್ತು ಇತರ ಪ್ರಾಚೀನ ಒಂದು ಸಂಕುಲದ ವಾಸ್ತುಶಿಲ್ಪದ ಅವಶೇಷಗಳನ್ನೂ ಒಳಗೊಂಡಿದೆ. ಈ ಸಂಗ್ರಹಾಲಯದ ಮುಖ್ಯ ಆಕರ್ಷಣೆ ಎಂದರೆ ಭಗವಾನ್ ಬುದ್ಧ ಧ್ಯಾನ ಮಗ್ನ ಸ್ಥಿತಿಯಲ್ಲಿ ಕುಳಿತಿರುವ ಮೂರ್ತಿ. ಗಾಂಧಾರ ಕಲಾ ಶಾಲೆಯ ತತ್ವಗಳ ಆಧಾರದ ಮೇಲೆ ಇದನ್ನು ಕಟ್ಟಲಾಗಿದೆ.