ಭೋರ್ ಸೈದನ್ ಎಂಬುದು ಕುರುಕ್ಷೇತ್ರ ಜಿಲ್ಲೆಯಲ್ಲಿನ ಪೆಹೊವಾ ಬ್ಲಾಕ್ನಲ್ಲಿನ ಒಂದು ಸಣ್ಣ ಹಳ್ಳಿಯಾಗಿದೆ. ಇದು ಥಾನೇಶ್ವರದಿಂದ ಪೆಹೊವಾ ಕಡೆಗೆ ಪಶ್ಚಿಮ ದಿಕ್ಕಿನಲ್ಲಿ ಸಾಗುವ ರಸ್ತೆಯಲ್ಲಿ 13 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಭೂರಿರವ ಕಲ್ಯಾಣಿಯ ಮೂಲ ನೆಲೆಯಾಗಿದೆ. ಪುರಾಣಗಳ ಪ್ರಕಾರ ಭೂರಿರವನನ್ನು ಅರ್ಜುನನು ವಿಶ್ವಾಸ ಘಾತುಕತನದಿಂದ ಕ್ರೂರವಾಗಿ ಕೊಂದು ಹಾಕಿದನಂತೆ. ಭೂರಿಯು ವೈಶಾಲಿಯ ರಾಜ ಸೋಮದತ್ತನ ಮಗ ಇಲ್ಲಿ ಒಂದು ಪ್ರಾಚೀನ ದಿಬ್ಬಕ್ಕೆ ಈತನ ಹೆಸರನ್ನೆ ಇಡಲಾಗಿದೆ.