ಈ ಸಂಸ್ಥಾನವನ್ನು 1998 ರಲ್ಲಿ ಮಹರ್ಷಿ ವಿಠ್ಠಲದಾಸ್ ಜಯಕ್ರಿಷನ್ ದೀಕ್ಷಿತರ್ ರವರು ಸ್ಥಾಪಿಸಿದರು. ಮೋಕ್ಷ ಪಡೆಯಲು ಅತ್ಯಂತ ಸಮರ್ಪಕವಾದ ನಾಮಸಂಕೀರ್ತನೆಯ ಮಹತ್ವವನ್ನು ಸಾರಲು ಹಾಗೂ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ವೇದಿಕೆಯನ್ನು ಸ್ಥಾಪಿಸಲಾಯಿತು. ಕುಂಬಕೋಣ ಆಡುತುರೈ ಹೆದ್ದಾರಿಯಲ್ಲಿ ಸುಮಾರು ಎಂಟು ಕಿ.ಮೀ ದೂರವಿರುವ ಗೋವಿಂದಪುರಂ ಎಂಬಲ್ಲಿ ಈ ಸಂಸ್ಥಾನವನ್ನು ನಿರ್ಮಿಸಲಾಗಿದೆ.
ಈ ಸ್ಥಳದಲ್ಲಿ ಕಾಂಚಿ ಮಠದ 59ನೇ ಪೀಠಾಧಿಪತಿಗಳಾದ ಶ್ರೀ ಭಗವನ್ನಾಮ ಬೋಧೇಂದ್ರ ಸರಸ್ವತಿ ಸ್ವಾಮಿಗಳಿಗೆ ಸಮಾಧಿ ಪ್ರಾಪ್ತಿಯಾಗಿತ್ತು. ಅತಿ ಭಕ್ತಿಯಿಂದ ಗಮನವಿಟ್ಟು ಆಲಿಸಿದರೆ ಈ ಸಮಾಧಿಯಿಂದ ಸ್ವಾಮೀಜಿಗಳು ರಾಮನಾಮ ಜಪಿಸುವುದು ಕೇಳಿಸುತ್ತದೆ ಎಂದು ಹೇಳಲಾಗುತ್ತದೆ. ಮೊದಲು ಪಿಸುಗುಡುತ್ತಾ ಬಳಿಕ ಉತ್ತುಂಗಕ್ಕೇರಿ ಬಳಿಕ ಮೌನವಾಗುವ ಈ ಅನುಭೂತಿಯನ್ನು ಅನುಭವಿಸಿದವರೇ ಧನ್ಯರು ಎಂದು ಹೇಳಲಾಗುತ್ತದೆ.