ಕೊಪ್ಪಳ ಪಟ್ಟಣವು ಹಿರೇಹಳ್ಳ ನದಿಯ ತಟದಲ್ಲಿದೆ. ಸುಮಾರು 400 ಮೀಟರು ಎತ್ತರದಲ್ಲಿರುವ ಕೊಪ್ಪಳ ಕೋಟೆಯು ಇಡೀ ಜಿಲ್ಲೆಯಲ್ಲೇ ಪ್ರಮುಖ ಪ್ರವಾಸಿ ತಾಣ. ಟಿಪ್ಪು ಸುಲ್ತಾನನು 1789ರಲ್ಲಿ ಈ ಕೋಟೆಯನ್ನು ಮರಾಠರಿಂದ ವಶಪಡಿಸಿಕೊಂಡು, ಫ್ರಾನ್ಸ್ನ ಇಂಜಿನಿಯರುಗಳ ಸಹಾಯದಿಂದ ಮರುನಿರ್ಮಾಣ ಮಾಡಿದ ಎಂದು ಹೇಳಲಾಗುತ್ತದೆ. 1790ರಲ್ಲಿ ನಿಜಾಮರ ಜೊತೆಗೂಡಿ ಬ್ರಿಟಿಷರು ಈ ಕೋಟೆಯನ್ನು ವಶಪಡಿಸಿಕೊಂಡಾಗ ಕೋಟೆ ಗಟ್ಟಿಯಾಗಿರುವುದರ ಬಗ್ಗೆ ಬ್ರಿಟಿಷರೂ ಕೂಡಾ ಹೊಗಳಿದ್ದರು.ಕೊಪ್ಪಳವನ್ನು ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಬಹುದು. ಕೊಪ್ಪಳವು ಗುಂತಕಲ್ ಮತ್ತು ಹುಬ್ಬಳ್ಳಿ ರೈಲ್ವೆ ಲೈನ್ನಲ್ಲಿ ಇದೆ. ಬೆಂಗಳೂರು, ವಿಜಯವಾಡ ಮತ್ತು ಬೆಳಗಾವಿಯಂತಹ ಪ್ರಮುಖ ನಗರಗಳಿಂದ ರೈಲು ಲಭ್ಯವಿದೆ. ಬಸ್ ಸೇವೆಗಳನ್ನೂ ಕೂಡಾ ಬೆಂಗಳೂರು, ಹೈದರಾಬಾದ್, ಹುಬ್ಬಳ್ಳಿ, ಗೋವಾ, ಮೈಸೂರು ಮತ್ತು ಇತರ ಭಾಗಗಳಿಂದ ಪಡೆಯಬಹುದು. ಕೊಪ್ಪಳದಲ್ಲಿ ಇನ್ನೂ ಹಲವು ಆಕರ್ಷಣೀಯ ಸ್ಥಳಗಳಿವೆ. ಅವುಗಳೆಂದರೆ, ಇಟಗಿ, ಮುನಿರಾಬಾದ್ನಲ್ಲಿ ಹುಲಿಗೆಮ್ಮ ದೇವಸ್ಥಾನ ಮತ್ತು ಕುಕನೂರಿನಲ್ಲಿ ಮಲ್ಲಿಕಾರ್ಜುನ ದೇವಸ್ಥಾನ.


Click it and Unblock the Notifications