ಕೇದಾರನಾಥದ ಪ್ರವಾಸಿತಾಣಗಳಲ್ಲಿ ಪ್ರಮುಖವಾಗಿ ಗುಪ್ತಕಾಶಿಯೂ ಒಂದು. ಅತ್ಯಂತ ಪುರಾತನ ಮಂದಿರವಾದ ವಿಶ್ವನಾಥ ದೇವಾಲಯ, ಮಣಿಕರ್ಣಿಕ ಕುಂಡ ಹಾಗೂ ಅರ್ಧನಾರೀಶ್ವರ ದೇವಾಲಯಗಳು ಪ್ರಮುಖವಾದವುಗಳು. ಅರ್ಧನಾರೀಶ್ವರ ದೇವಾಲಯದಲ್ಲಿರುವುದು ಶಿವನ ಮೂರ್ತಿ. ಇದು ಅರ್ಧ ಪುರುಷ ಹಾಗೂ ಅರ್ಧ ನಾರಿ ರೂಪದಲ್ಲಿದೆ.
ಇನ್ನು ವಿಶ್ವನಾಥ ದೇವಾಲಯ ಕೂಡ ಅತ್ಯಂತ ಪುರಾತನ ಮಂದಿರವಾಗಿದ್ದು, ಶಿವನಿಗೆ ಮೀಸಲಾಗಿದೆ. ಪೌರಾಣಿಕ ಹಿನ್ನಿಲೆಯ ಪ್ರಕಾರ, ಈ ಸ್ಥಳದಲ್ಲೇ ಶಿವನು ಕೆಲ ಕಾಲ ನೆಲೆಸಿದ್ದ. ಇದಲ್ಲದೆ, ಸ್ವತಃ ಶಿವನೆ ಗೂಳಿಯ ರೂಪದಲ್ಲಿ ಕೇದಾರನಾಥದಲ್ಲಿಯೂ ಅಡಗಿದ್ದ. ಪಾಂಡವರು ತನ್ನನ್ನು ಭೇಟಿ ಮಾಡುವುದನ್ನು ತಪ್ಪಿಸಿಕೊಳ್ಳಲು ಗೂಳಿಯ ರೂಪವನ್ನು ಹೊಂದಿದ್ದ ಶಿವನು ನೆಲಕ್ಕೆ ಹಾರಿದ. ಪರಿಣಾಮವಾಗಿ ಇಲ್ಲಿನ ನೆಲದ ಮೇಲೆ ಬೆನ್ನು ಬಿದ್ದರೆ, ಕಾಲುಗಳು ತುಂಗನಾಥದಲ್ಲಿ ಹರಡಿದವು. ಮುಖವು ರುದ್ರನಾಥದಲ್ಲಿ ಬಿದ್ದರೆ ನಾಭಿ ಅಥವಾ ಹೊಕ್ಕಳು ಮದ್ಮಹೇಶ್ವರದಲ್ಲಿ ಚದುರಿ ತಲೆಯು ಕಲ್ಪೇಶ್ವರದಲ್ಲಿ ಬಿದ್ದಿತು. ಈ ಎಲ್ಲಾ ತಾಣಗಳೂ ನಂತರದ ಸಮಯದಲ್ಲಿ ಜನಪ್ರಿಯ ಧಾರ್ಮಿಕ ತಾಣಗಳಾಗಿ ಪ್ರಸಿದ್ಧಿ ಪಡೆದವು. ಇದಕ್ಕೆ ಸಮೀಪದ ಇತರೆ ಜನಪ್ರಿಯ ತಾಣವೆಂದರೆ ಗಾಂಧಿ ಸರೋವರ. ವಾಸುಕಿತಾಲ್ನಿಂದ ಇದು ಎರಡು ಕಿ.ಮೀ. ದೂರದಲ್ಲಿದೆ. ಕೇದಾರನಾಥದಿಂದ ಇದರ ದೂರ 8 ಕಿ.ಮೀ. ಮಾತ್ರ.