ಕಾರವಾರ ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 17 ರ ಹತ್ತಿರದಲ್ಲಿರುವ ಆಕರ್ಷಕ ಕಾಳಿ ಸೇತುವೆಯನ್ನು 1986 ರಲ್ಲಿ ಕಾಳಿ ನದಿಯ ಮೇಲೆ ನಿರ್ಮಿಸಲಾಯಿತು. ಕರ್ನಾಟಕವು ಗೋವಾದೊಂದಿಗೆ ಸಂಪರ್ಕ ಹೊಂದಲು ಕಾರಣವಾಗಿರುವ ಈ ಸೇತುವೆಯು ಕರ್ನಾಟಕದ ಹೇಮ್ಮೆಯ ಪ್ರತೀಕವೂ ಹೌದು. ಕಾರವಾರ ಬೀಚ್, ಸದಾಶಿವಗಡ ಕೋಟೆ, ಗುಡ್ಡಬೆಟ್ಟಗಳ ಸರಣಿ, ಸೂರ್ಯೊದಯ ಮತ್ತು ಸೂರ್ಯಾಸ್ತ ಹಾಗು ನದಿ ಪಾತ್ರದ ಪ್ರದೇಶ ಮುಂತಾದ ಅದ್ಭುತ ಪ್ರಾಕೃತಿಕ ವಿಹಂಗಮ ನೋಟಗಳನ್ನು ನೀವು ನೋಡಬಯಸುವಿರಾದರೆ ಖಂಡಿತವಾಗಿಯು ನೀವು ಈ ಸೇತುವೆಗೆ ಭೇಟಿ ನೀಡಲೆ ಬೇಕು ಅಥವಾ ಅದರ ಮೇಲೆ ಚಲಿಸುವಾಗ ಒಂದು ಕ್ಷಣ ಇದರ ಮೇಲೆ ನಿಂತು ಆ ದೃಶ್ಯಗಳ ಆನಂದವನ್ನು ಸವಿಯಬಹುದು. ಇಷ್ಟೆ ಅಲ್ಲ, ಇದರ ಮೇಲೆ ನಿಂತಾಗ ಕಾಳಿ ನದಿಯು ಅರೇಬಿಯನ್ ಸಮುದ್ರದಲ್ಲಿ ಸಮಾಗಮ ಹೊಂದುವಂತಹ ರೋಮಾಂಚನಕಾರಿ ದೃಶ್ಯವನ್ನು ಕೂಡ ಕಾಣಬಹುದು.