ಜೋಶಿಮಠದಲ್ಲಿರುವ ಈ ದೇವಸ್ಥಾನವು ಭಗವಾನ್ ವಿಷ್ಣುವಿನ 4 ನೇ ಅವತಾರವಾದ ನರಸಿಂಹನಿಗೆ ಮುಡಿಪಾಗಿದೆ. ಈ ದೇವಸ್ಥಾನದಲ್ಲಿ ಖ್ಯಾತ ಸಂತ ಶ್ರೀ ಬದರಿನಾಥರು ಚಳಿಗಾಲದ ಸಮಯದಲ್ಲಿ ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಈ ದೇವಸ್ಥಾನದಲ್ಲಿರುವ ನರಸಿಂಹ ದೇವರ ಮೂಲ ವಿಗ್ರಹವು ದಿನೆ ದಿನೆ ಕುಗ್ಗುತ್ತಿದೆ ಎನ್ನಲಾಗುತ್ತಿದೆ. ನಂಬಿಕೆಗಳ ಪ್ರಕಾರ, ಯಾವಾಗ ಈ ವಿಗ್ರಹದ ಮಣಿಕಟ್ಟು (ವ್ರಿಸ್ಟ್) ಮುಂದೋಳಿನಿಂದ ಬೇರ್ಪಡೆಯಾಗುತ್ತದೊ, ಅಂದು ದೊಡ್ಡ ಪ್ರಮಾಣದ ಭೂಕುಸಿತ ಉಂಟಾಗಿ ಬದರಿನಾಥ್ ಗೆ ಹೋಗುವ ಮಾರ್ಗವು ಶಾಶ್ವತವಾಗಿ ಮುಚ್ಚಲ್ಪಡುತ್ತದೆ.