`ಕಾಯಶೋಧನ' ಎನ್ನುವ ಪದವು `ಕಾಯ' ಮತ್ತು `ಶೋಧನ' ಎನ್ನುವ ಪದದಿಂದ ಬಂದಿದೆ. ಕಾಯವೆಂದರೆ ದೇಹ ಮತ್ತು ಶೋಧನವೆಂದರೆ ದೇಹದಲ್ಲಿರುವ ಎಲ್ಲಾ ಕಲ್ಮಷ, ವಿಷಾಣು, ಹೊರಹಾಕಿ ನಿರ್ವಿಶೀಕರಣಗೊಳಿಸುವುದು. ಕಾಯಶೋಧನಕ್ಕೆ ಮೂರು ಮಹತ್ವದ ವಿಧಾನಗಳನ್ನು ಹೊಂದಿದೆ.
ಮೊದಲನೇಯದು ನಿರ್ವಿಶೀಕರಣ. ಇದಕ್ಕೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಪ್ರತಿಯೊಬ್ಬರಿಗೆ ಕೆಲವೊಂದು ಸಾಮಾನ್ಯ ಪ್ರಕ್ರಿಯೆಗಳಿದ್ದರೂ ವ್ಯಕ್ತಿಯ ದೇಹ ರಚನೆಯ ಆಧಾರದಲ್ಲಿ ನಿರ್ವಿಶೀಕರಣಕ್ಕೆ ವಿಶೇಷ ತಂತ್ರಗಾರಿಕೆ ಬೇಕಾಗುತ್ತದೆ.
ಎರಡನೇ ಹಂತದಲ್ಲಿ ವಿಷ ಹಾಗೂ ತ್ಯಾಜ್ಯಗಳನ್ನು ಹೊರಹಾಕಿದ ಬಳಿಕ ದೇಹದ ಕಾಂತಿಯನ್ನು ವೃದ್ಧಿಸುವುದು. ದೇಹದ ಪ್ರತಿಯೊಂದು ಅಂಗಾಂಗಳು ಸಹಯೋಗದೊಂದಿಗೆ ಕೆಲಸ ಮಾಡುವಂತೆ ತಯಾರುಗೊಳಿಸುವುದು.
ಮೂರನೇ ಹಾಗೂ ಅಂತಿಮ ಹಂತ ಪೌಷ್ಠಿಕಾಂಶ. ವ್ಯಕ್ತಿಯ ದೇಹರಚನೆಗೆ ಅನುಗುಣವಾಗಿ ಸೂಕ್ತ ಆಹಾರ ಪದ್ಧತಿಯನ್ನು ಪಾಲಿಸುವಂತೆ ಪ್ರತಿಯೊಬ್ಬ ರೋಗಿಗೂ ಸಲಹೆ ನೀಡಲಾಗುತ್ತದೆ. ಆಹಾರ ಕ್ರಮದಲ್ಲಿ ಹಣ್ಣು, ತರಕಾರಿ ಮತ್ತು ಹಣ್ಣಿನ ರಸಗಳ ಮಿಶ್ರಣವಿರಬೇಕು.
ಜಿಂದ್ ನಿಂದ ಉತ್ತರದಲ್ಲಿ 16 ಕಿ.ಮೀ. ದೂರದಲ್ಲಿರುವ ಕಸೊಹಾನ್ ನಲ್ಲಿ ಕಾಯಶೋಧನ ಮಂದಿರವಿದೆ. ಪುರಾಣಗಳ ಪ್ರಕಾರ ವಿಷ್ಣು ದೇವರು ಲೋಕೋದ್ಧಾರಕ್ಕಾಗಿ ಈ ಸ್ಥಳದಲ್ಲಿ ಸ್ನಾನ ಮಾಡಿ ಕಾಯಶೋಧನವನ್ನು ನಿರ್ಮಿಸಿದ.


Click it and Unblock the Notifications