ಒರ್ಚಾ ಇದನ್ನು 1501 ರಲ್ಲಿ ಮಹಾರಾಜ ರುದ್ರ ಪ್ರತಾಪ ಸಿಂಗನು ಸ್ಥಾಪಿಸಿದನು. ಒರ್ಚಾ ಇದನ್ನು ಊರ್ಚಾ ಎಂದು ಕರೆಯುತ್ತಾರೆ. ಇದು ಟಿಕಾಮಗರಹ್ ಜಿಲ್ಲೆಯಲ್ಲಿದೆ. ಇದು ಮಧ್ಯ ಪ್ರದೇಶ ರಾಜ್ಯದ, ಬುಂದೇಲ ಖಂಡ ಪ್ರದೇಶದ ಒಂದು ಸಂಸ್ಥಾನವಾಗಿತ್ತು. ಇದು ಬೇತ್ವಾ ನದಿಯ ತೀರದ ಮೇಲೆ ನೆಲೆಗೊಂಡಿದ್ದು ಝಾನ್ಸಿಯಿಂದ 18 ಕೀಲೋ ಮೀಟರ ಮತ್ತು ಟಿಕಾಮಗರಹ್ ಜಿಲ್ಲೆಯಿಂದ 80 ಕೀಲೊ ಮೀಟರ ದೂರದಲ್ಲಿದೆ. ಮಹಾರಾಜ ರುದ್ರ ಪ್ರತಾಪ ಸಿಂಗನು ಒರ್ಚಾ ಕೋಟೆಯನ್ನು ಸಹ ನಿರ್ಮಿಸಿದನು. ಇದೇ ವಂಶಕ್ಕೆ ಸೇರಿದವರಾದ ರಾಣಿ ಗಣೇಶ ಬಾಯಿಯು ಚತುರ್ಭುಜ ದೇವಸ್ಥಾನವನ್ನು ನಿರ್ಮಿಸಿದಳು. ಆಗ ದೆಹಲಿಯಲ್ಲಿ ಮೊಘಲ ಚಕ್ರವರ್ತಿ ಅಕ್ಬರರ ಆಡಳಿತವಿತ್ತು.
ರಾಜ ಮಂದಿರವು ಇಲ್ಲಿರುವ ಒಂದು ಪ್ರಮುಖ ಸ್ಥಳವಾಗಿದೆ. ಇದು ಇಲ್ಲಿನ ಪ್ರಮುಖ ಹೆಗ್ಗುರುತು ಆಗಿದೆ. ಇದನ್ನು ಮಧುಕರ ಷಾ ನು 1554 ರಿಂದ 1591 ರ ಅವಧಿಯಲ್ಲಿ ನಿರ್ಮಿಸಿದನು. ಬೇತ್ವಾ ನದಿಯು ಅರಮನೆಯ ಕೋಟೆಯನ್ನು ಸುತ್ತುವರೆದು ಅದನ್ನು ಸುಂದರ ದ್ವೀಪವನ್ನಾಗಿ ರೂಪಿಸುತ್ತದೆ. ಈ ಕೋಟೆಯು ಹಲವು ಕಟ್ಟಡಗಳನ್ನು ಒಳಗೊಂಡಿದೆ. ಇದನ್ನು ರಾಜಾ ಬೀರ ಸಿಂಗ ದೇವನು ಅವನ ಆಡಳಿತದ ವಿವಿಧ ಅವಧಿಯಲ್ಲಿ ನಿರ್ಮಿಸಿದನು. ಈ ಕಟ್ಟಡಗಳ ವಿಶೇಷ ಲಕ್ಷಣ ಎಂದರೆ ಇವು ಒಂದಕ್ಕೊಂದು ಜೋಡಣೆಯಾಗಿವೆ. ಇಲ್ಲೆ ಬೇತ್ವಾ ನದಿಯ ತೀರದ ಮೇಲೆ ಹಲವು ಚತ್ತರಿಗಳನ್ನು ಕಾಣಬಹುದು. ಇದು ಕೋಟೆಯ ಸಮೀಪದಲ್ಲಿದೆ.


Click it and Unblock the Notifications