ಈ ಪ್ರಸಿದ್ಧ ಝಾನ್ಸಿ ಕೋಟೆಯನ್ನು ಒರ್ಚಾ ಸಂಸ್ಥಾನದ ರಾಜಾ ಬೀರ ಸಿಂಗ ದೇವನು 1613 ರಲ್ಲಿ ಬೆಟ್ಟದ ತುದಿಯ ಮೇಲೆ ನಿರ್ಮಿಸಿದನು. ಈ ಕೋಟೆಯು ಸುಮಾರು 16 ಅಡಿಯಿಂದ 20 ಅಡಿ ದಪ್ಪದ ಗ್ರಾನೈಟ ಗೋಡೆಗಳಿಂದ ಇದು ಸುತ್ತುವರೆದಿದೆ. ಈ ಮಹಾಗೋಡೆಯು ಹತ್ತು ದ್ವಾರಗಳನ್ನು ಒಳಗೊಂಡಿದ್ದು, ಈ ಪ್ರತಿಯೊಂದು ದ್ವಾರವು ಒಬ್ಬೊಬ್ಬ ಅಲ್ಲಿಯ ಪ್ರಸಿದ್ಧ ಆಡಳಿತಗಾರರ ಅಥವಾ ಪ್ರಸಿದ್ದ ಸ್ಥಳದ ಹೆಸರನ್ನು ಒಳಗೊಂಡಿದೆ.
ಅದರಂತೆ ಇಲ್ಲಿ ಚಾಂದ ದ್ವಾರ, ದತಿಯಾ ದರ್ವಾಜಾ, ಜಹರಾನ ದ್ವಾರ, ಲಕ್ಷ್ಮಿ ದ್ವಾರ, ಒರ್ಚಾ ದ್ವಾರ ಸಾಗರ ದ್ವಾರ, ಉನಾನೋ ದ್ವಾರ, ಖಂಡೇ ರಾವ ದ್ವಾರ, ಸೈನಿಯಾರ ದ್ವಾರ. ಹೀಗೆ ಇಲ್ಲಿ ಹತ್ತು ದ್ವಾರಗಳಿವೆ. ಇದರಲ್ಲಿ ಕೆಲವೊಂದು ಈಗ ಕಾಲಾವಧಿಯ ಪರಿಣಾಮವಾಗಿ ಕಾಣುತ್ತಿಲ್ಲ. ಇನ್ನು ಕೆಲವು ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ.
ಝಾನ್ಸಿ ಕೋಟೆಯು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ಪ್ರಮುಖ ಪಾತ್ರವನ್ನು ವಹಿಸಿದೆ. ಇದು 1857 ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ಪ್ರಮುಖ ಕೇಂದ್ರವಾಗಿತ್ತು. ಈ ಕೋಟೆಯ ಗೊಡೆಗಳು ರಾಣಿ ಲಕ್ಷ್ಮಿ ಬಾಯಿಯ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಕಥನವನ್ನು ಹೇಳುತ್ತವೆ. ಅಂದಿನ ಇತಿಹಾಸವನ್ನು ಚಿತ್ರಿಸುತ್ತವೆ. ಈ ಕೋಟೆಯು ವಸ್ತು ಸಂಗ್ರಹಾಲಯವನ್ನು ಸಹ ಹೊಂದಿದ್ದು, ಇಲಲಿ ವಿವಿಧ ಬಗೆಯ ಆಯುಧಗಳು, ಈಟಿ ಭರ್ಜಿಗಳನ್ನು, ಬ್ರಿಟಿಷರು ಉಪಯೋಗಿಸಿದ ಆಯುಧಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು.