ಮಹಾರಾಜ ಗಂಗಾಧರ ರಾವ ಚತ್ತರಿ ಇದು ಒಂದು ಯುದ್ಧ ಸ್ಮಾರಕವಾಗಿದೆ. ಇದನ್ನು ರಾಣಿ ಲಕ್ಷ್ಮಿ ಬಾಯಿಯು ಇದನ್ನು ತನ್ನ ಪತಿಯಾದ ಮಹಾರಾಜ ಗಂಗಾಧರರಾವನ ಮರಣದ ನಂತರ ಅವನ ನೆನೆಪಿಗಾಗಿ ನವಂಬರ 21, 1853 ರಲ್ಲಿ ನಿರ್ಮಿಸಿದಳು. ಇದು ಲಕ್ಷ್ಮಿ ಕೊಳದ ಹತ್ತಿರದಲ್ಲಿದೆ. ಈ ಚತ್ತರಿಯು ಝಾನ್ಸಿ ನಗರದ ಒಂದು ಬಹು ಪ್ರಸಿದ್ದ ಜನಪ್ರಿಯ ಐತಿಹಾಸಿಕ ಸ್ಮಾರಕ ಎಂದು ಪ್ರಾಮುಖ್ಯತೆಯನ್ನು ಪಡೆದಿದೆ. ಇದು ನಿರ್ಮಾಣವಾಗಿ 150 ವರ್ಷ ಕಳೆದಿದೆ. ಈ ಅವಧಿಯಲ್ಲಿ ಇದು ಅನೇಕ ಆಕ್ರಮಣಗಳನ್ನು ಸಹಿಸಿಕೊಂಡಿದೆ. ಇದರ ಛಾವಣಿಯು ಸುಂದರವಾಗಿ ಕೆತ್ತಲ್ಪಟ್ಟ ಕಲಾತ್ಮಕ ಕಂಬಗಳ ಮೇಲೆ ನಿಂತಿದೆ. ಇದು ಅಂದಿನ ಕಾಲದ ಭವ್ಯ ವಾಸ್ತು ಶಿಲ್ಪ ಶೈಲಿಗೆ ಒಂದು ಅದ್ಭುತ ಉದಾಹರಣೆಯಾಗಿದೆ.
ಈ ಚತ್ತರಿಯು ಸ್ಥಳಿಯರನ್ನು ಸೇರಿದಂತೆ ಅಸಂಖ್ಯಾತ ಪ್ರವಾಸಿಗರನ್ನು ಭಾವನಾತ್ಮಕ ನೆಲೆಯಲ್ಲಿ ಆಕರ್ಷಿಸುತ್ತದೆ. ಇದು ಮನಸ್ಸಿನಲ್ಲಿ ದೇಶ ಭಕ್ತ ಭಾವನೆಯನ್ನು ಜಾಗೃತಗೊಳಿಸುತ್ತದೆ. ವಿಶೇಷವಾಗಿ ರಾಣಿ ಲಕ್ಷ್ಮಿ ಬಾಯಿ ಮತ್ತು ಅಂದಿನ ಕಾಲದ ನಾಯಕರ ಕುರಿತು ಇದು ಗೌರವಾದರವನ್ನು ಪ್ರಕಟ ಪಡಿಸುತ್ತದೆ.


Click it and Unblock the Notifications