ಅಂಬರ್ ಕೋಟೆಯು ರಾಜ ಮಾನ್ ಸಿಂಗ್, ಮಿರ್ಝಾ ರಾಜಾ ಜೈ ಸಿಂಗ್ ಮತ್ತು ಸವಾಯಿ ಜೈ ಸಿಂಗ್ರಿಂದ ನಿರ್ಮಿಸಲ್ಪಟ್ಟಿತು. ಈ ಕಟ್ಟಡದ ನಿರ್ಮಾಣಕ್ಕೆ ಸುಮಾರು 200 ವರ್ಷಗಳು ತಗುಲಿದೆ. ಜೈಪುರ ಸ್ಥಾಪನೆಯಾಗುವುದಕ್ಕೂ ಮೊದಲು ಈ ಪ್ರದೇಶವು ಕಚವಾಹಾ ಆಡಳಿತಗಾರರಿಗೆ ರಾಜಧಾನಿಯಾಗಿ ಸೇವೆ ಸಲ್ಲಿಸಿತ್ತು.
ಕೋಟೆಯು ಮೂಥಾ ಕೆರೆಯ ದಡದಲ್ಲಿದೆ. ಅರಮನೆ, ಪೆವಿಲಿಯನ್ಗಳು, ಹಾಲ್ಗಳು, ದೇವಸ್ಥಾನಗಳು ಮತ್ತು ಗಾರ್ಡನ್ ಇಲ್ಲಿರುವುದನ್ನು ಕಾಣಬಹುದು. ಪ್ರವಾಸಿಗರಿಗೆ ಆನೆ ಸವಾರಿ ಇಲ್ಲಿ ಲಭ್ಯವಿದೆ. ಆನೆಯ ಮೇಲಿನಿಂದ ಪ್ರವಾಸಿಗರು ಕೋಟೆಯ ದೃಶ್ಯವನ್ನು ನೋಡಬಹುದು. ಅರಮನೆಯ ಆವರಣದಲ್ಲಿ ಹಿಂದೂ ದೇವತೆಯಾದ ಶೀಲಾ ಮಾತಾಗೆ ಅರ್ಪಿತವಾದ ದೇವಸ್ಥಾನವೂ ಕೂಡಾ ಇದೆ. ದೀವಾನ್-ಎ-ಆಮ್, ಶೀಶ್ ಮಹಲ್, ಗಣೇಶ್ ಪೋಲ್, ಸುಖ ನಿವಾಸ, ಜಸ್ ಮಂದಿರ್, ದಿಲಾರಾಮ್ ಬಾಗ್ ಮತ್ತು ಮೋಹನ ಬಾರಿಯು ಇಲ್ಲಿನ ಇನ್ನಿತರ ಪ್ರಮುಖ ಪ್ರವಾಸಿ ಆಕರ್ಷಣೆಗಳು.