ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಎಲ್ಲಾದರೂ ಹೋಗಬೇಕನ್ನಿಸಿದರೆ ಕೂಡಲೇ ನೆನಪಾಗುವುದು ಥುಂಪಾಚಿ ಕಾಲ್ವೆರಿ ಸಮುಚ್ಛಯ. ಇದು ಥೋದುಪುಜಾ ಪಟ್ಟಣದಿಂದ 35 ಕಿಲೋಮೀಟರ್ ಅಂತರದಲ್ಲಿದೆ. ನದಿ ತೀರದಲ್ಲಿ ವಿಹರಿಸಲು ಪ್ರಸಕ್ತವಾದ ಸ್ತಳ ಇದು. ನಿಸರ್ಗ ಸೌಂದರ್ಯ, ನೀರು, ಹಕ್ಕಿ, ಪ್ರಾಣಿಗಳನ್ನು ನೋಡುತ್ತ ಮನಸಿಗೆ ಮುದ ಸಂಪಾದಿಸುವ ಮನಮೋಹಕ ತಾಣ ಇದು. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸುತ್ತಾಡುವುದಕ್ಕೆ ಪ್ರಸಕ್ತವಾದ ಸ್ತಳ ಇದು. ರಜಾ ಕಾಲದಲ್ಲಿ ಇಡುಕ್ಕಿ ಜಿಲ್ಲೆಗೆ ಬಂದರೆ ಈ ಪ್ರದೇಶಕ್ಕೆ ಭೇಟಿ ನೀಡಲೇ ಬೇಕು. ಮನಸಿಗೆ ಮುದ ನೀಡುವ ಅಪರೂಪದ ತಾಣ ಇದು. ಧ್ಯಾನ ಮತ್ತು ಪ್ರಕೃತಿಯ ಸಾಂಗತ್ಯದಲ್ಲಿ ಯಾಂತ್ರಿಕ ಜೀವನದಲ್ಲಿನ ಸುಖಗಳನ್ನು ಬಿಡಿಸಿಕೊಂಡು ಹೊಸ ಚೈತನ್ಯವನ್ನು ಪಡೆಯುವುದಕ್ಕೆ ಕಾವೇರಿ ಸಮುಚ್ಚಯ ಹೇಳಿ ಮಾಡಿಸಿದ ಸ್ಥಳ. ನದಿ ದಂಡೆಯ ಗುಂಟ ನಡೆಯುತ್ತಾ ಹೋದರೆ ಪ್ರಕೃತಿ ಸವಿಯನ್ನು ಮತ್ತಷ್ಟು ಆಸ್ವಾಧಿಸಬಹುದಾಗಿದೆ.
ಈ ಪ್ರದೇಶದಲ್ಲಿಯೇ ರಾತ್ರಿ ತಂಗುವ ಯೋಚನೆಯಿದ್ದರೂ ನೀವೇನೂ ಚಿಂತಿಸಬೇಕಾಗಿಲ್ಲ. ಉತ್ತಮ ಹೋಟೆಲ್ಲುಗಳಿವೆ.


Click it and Unblock the Notifications