ಹಂಪಿಯ ಮತ್ತೊಂದು ಆಕರ್ಷಣೆಯೆಂದರೆ, ಚೌಕಾಕೄತಿಯಲ್ಲಿ ನಿರ್ಮಿತವಾದ ಮಹಾನವಮಿ ದಿಬ್ಬವಾಗಿದ್ದು, ರಾಜನಾದ ಕೄಷ್ಣದೇವರಾಯನು ಉದಯಗಿರಿಯ( ಈಗಿನ ಒರಿಸ್ಸಾದಲ್ಲಿದೆ) ಮೇಲೆ ತನ್ನ ಜಯದ ಸಂಕೇತವಾಗಿ ಇದನ್ನು ನಿರ್ಮಿಸಿದ್ದಾನೆ. ಹಂಪಿಯಲ್ಲೇ ಇದೊಂದು ಎತ್ತರದ ರಚನೆಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಿಂದ ಇದನ್ನು ಸರಳವಾಗಿ ನೋಡಬಹುದಾಗಿದೆ. ಇದು ತನ್ನ ಕೆತ್ತನೆಯ ಕೆಲಸಕ್ಕೆ ಐತಿಹಾಸಿಕ ಮಹತ್ವವನ್ನು ಪಡೆದಿದ್ದು, ನೋಡಲೇ ಬೇಕಾದ ಸ್ಥಳವಾಗಿದೆ.
ಸುಂದರವಾಗಿ ಕೆತ್ತಲಾದ ಕುದುರೆಗಳು, ಸೈನಿಕರು ಮತ್ತು ಆನೆಗಳನ್ನು ಈ ದಿಬ್ಬದ ಮೇಲೆ ಕಾಣಬಹುದು. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿರುವ ಮೆಟ್ಟಿಲುಗಳ ಮೂಲಕ, ಪ್ರವಾಸಿಗರು ಇದರ ತುದಿಯನ್ನೂ ಕೂಡ ತಲುಪಬಹುದಾಗಿದೆ. ಇದರ ತುದಿಯಲ್ಲಿ ನಿಂತಾಗ, ಸುತ್ತಮುತ್ತಲಿನ ವಿಹಂಗಮ ನೋಟವು ಕಣ್ಮನಸೇಳೆಯುತ್ತದೆ. ಇತಿಹಾಸಕಾರರ ಪ್ರಕಾರ ಅಂದಿನ ರಾಜರುಗಳು, ವಿಶೇಷವಾಗಿ ನವರಾತ್ರಿಯಂದು ಜರುಗುವ ಕಾರ್ಯಕ್ರಮಗಳು, ಮೆರವಣಿಗೆಗಳನ್ನು ನೋಡಲು ಇದನ್ನು ಉಪಯೋಗಿಸುತ್ತಿದ್ದರೆನ್ನಲಾಗಿದೆ. ಕಾಲಕ್ಕನುಗುಣವಾಗಿ ವಿವಿಧ ರಾಜರುಗಳ ಆಡಳಿತದಲ್ಲಿ ಈ ಕಟ್ಟಡವು ವಿಸ್ತರಿಸಿತು ಎಂದು ನಂಬಲಾಗಿದೆ.