ಜೈನರ 24 ನೆ ತೀರ್ಥಂಕರ ಭಗವಾನ್ ಮಹಾವೀರನ ಗೌರವಾರ್ಥವಾಗಿ ಆಚರಿಸುವ ಆಚರಣೆ ಈ ವೈಶಾಲಿ ಮಹೋತ್ಸವ. ಹಾಜಿಪುರದಿಂದ ವಾಯುವ್ಯ ಭಾಗದಲ್ಲಿ 35 ಕಿ ಮೀ ಅಂತರದಲ್ಲಿರುವ ವೈಶಾಲಿ ಒಂದು ಪುರಾತನ ಗ್ರಾಮ. ಈ ಸ್ಥಳವು ಪುರಾತನ ಸ್ಥಾನವಾದ ಅಶೋಕ ಸ್ಥಂಭ,ಬೌದ್ಧ ಸ್ತೂಪ, ಅಭಿಷೇಕ ಪುಷ್ಕರಣಿ ಇವುಗಳಿಗೆ ಹೆಸರುವಾಸಿಯಾಗಿದೆ. ವೈಶಾಲಿಯಿಂದ 4 ಕಿ ಮೀ ಅಂತರದಲ್ಲಿರುವ ಕುಂಡಲೀಪುರದಲ್ಲಿ ಮಹಾವೀರ ಜನಿಸಿದನು. ಹಿಂದೂಗಳ ಮೊದಲ ತಿಂಗಳ ಹುಣ್ಣಿಮೆಯ ದಿನ ಇಲ್ಲಿ ವೈಶಾಖ ಪೂರ್ಣಿಮೆ ಹಬ್ಬವನ್ನು ಆಚರಿಸಲಾಗುತ್ತದೆ. 3 ನೇ ಶತಮಾನದಲ್ಲಿ ಬುದ್ಧನು ಈ ಭೂಮಿಯ ಮಣ್ಣನ್ನು ಎರಡು ಬಾರಿ ಆಶೀರ್ವದಿಸಿದ ಎನ್ನಲಾಗಿದೆ.