ಸಿಂಧಿಯ ರಾಜವಂಶದವರ ಛತ್ರಿಗಳು (ಒಂದು ರೀತಿಯ ಕಟ್ಟಡದ ರಚನೆಗಳು), ಗ್ವಾಲಿಯರ್ ನಗರದ ಹೊರವಲಯದಲ್ಲಿದೆ. ಜೀವಜಿರಾವ ಸಿಂಧಿಯ, ದೌಲತ್ ರಾವ ಸಿಂಧಿಯ ಮತ್ತು ಜಂಕೋಜಿ ರಾವ ಸಿಂಧಿಯ ಅವರ ಛತ್ರಿಗಳು ಇಲ್ಲಿನ ಪ್ರಮುಖ ಸ್ಮಾರಕಗಳಾಗಿವೆ. ಸಿಂಧಿಯ ರಾಜವಂಶದವರು ಮರಾಠ ಕುಲದವರೇ ಆಗಿದ್ದು, ಇವರು ಗ್ವಾಲಿಯರ್ ಅನ್ನು ಮೊಘಲರ ನಂತರ ಆಳಿದರು. ಸಿಂಧಿಯರ ಛತ್ರಿಗಳು ಶಿವಪುರಿಯಲ್ಲಿವೆ.
ಶಿವ ಪುರಿ ಎಂದರೆ ಶಿವನ ನಗರ ಎಂದರ್ಥ. ಇದು ಅನೇಕ ಹಿಂದು ದೇವಸ್ಥಾನಗಳನ್ನು ಹೊಂದಿದ್ದು, ಹಿಂದು ಜನರು ಪೂಜಿಸುವ ಪ್ರಮುಖ ಸ್ಥಳವಾಗಿದೆ. ಸಿಂಧಿಯ ರಾಜವಂಶದವರ ಆಡಳಿತದ ಅವಧಿಯಲ್ಲಿ ಈ ಸ್ಥಳವು ಹೆಚ್ಚು ಅಭಿವೃದ್ಧಿಗೊಂಡಿತು. ಸಿಂಧಿಯ ರಾಜವಂಶದವರ ಈ ಛತ್ರಿಗಳು ಮಧ್ಯಕಾಲೀನ ಹಿಂದು ವಾಸ್ತುಶಿಲ್ಪಕ್ಕೆ ಅತ್ಯಂತ ಉತ್ತಮ ಉದಾಹರಣೆಯಾಗಿದೆ. ಇದು ಗ್ವಾಲಿಯರ್ ನಗರದಿಂದ ಕೆಲವು ಕೀಲೋ ಮೀಟರ ದೂರದಲ್ಲಿರುವ ಅಮರಟಂಕ ನಲ್ಲಿದೆ. ಛತ್ರಿಅಗಳ ನಿಜವಾದ ಅರ್ಥ ಅರಸೊತ್ತಿಗೆಯ ಸಮಾಧಿ ಎಂದು.