ವೈದ್ವೇಶ್ವರ ದೇವಾಲಯ ರತ್ನಾಗಿರಿ ತಾಲೂಕಿನ ಗುಹಾಘರ್ ನಲ್ಲಿದೆ. ಗುಹಾಘರ್ ದೇವಾಲಯದಂತೆ ವೈದ್ಯೇಶ್ವರ ದೇವಾಲಯವೂ ರಾಜ್ಯ ಸರಕಾರದ ಗುಹಾಘರ್ ಸಾರಿಗೆ ಡಿಪೋದ ಸಮೀಪದಲ್ಲಿದೆ.
ಇದು ಶಿವನ ಆರಾಧಕರ ದೇವಾಲಯವಾಗಿದ್ದು ಇಲ್ಲಿ ತಾಳಕೇಶ್ವರ, ಉದಾಳೇಶ್ವರ ಮತ್ತು ಬಾಲಕೇಶ್ವರ ದೇವರ ಮೂರ್ತಿಗಳಿವೆ. ಇದರ ಜೊತೆಗೆ ಗಣೇಶ, ಶ್ರೀದೇವಿ, ವಿಷ್ಣು ಮತ್ತು ಸೂರ್ಯ ದೇವರ ಮೂರ್ತಿಗಳೂ ಇಲ್ಲಿವೆ.
ಈ ದೇವಾಲಯ ಶಿವ ದೇವರ ಆರಾಧನೆಯ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಪ್ರಮುಖ ಆಕರ್ಷಣೆಯ ಸ್ಥಳವಾಗಿರುತ್ತದೆ. ಇದೆ ಸಂದರ್ಭದಲ್ಲಿ ದೊಡ್ಡ ಜಾತ್ರೆಯೂ ಇಲ್ಲಿ ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ ಇಲ್ಲಿನ ಸ್ಥಳೀಯ ಸಂಸ್ಕೃತಿ ಜೊತೆ ಪ್ರವಾಸಿಗರು ಬೆರೆಯಬಹುದಾಗಿದೆ.


Click it and Unblock the Notifications