ಮಹಾಗಣಪತಿ ದೇವಾಲಯವು ಮಹಾಬಲೇಶ್ವರ ದೇವಸ್ಥಾನದ ಹತ್ತಿರದಲ್ಲೇ ಇರುವ ಒಂದು ಹೆಸರಾಂತ ಧಾರ್ಮಿಕ ತಾಣವಾಗಿದೆ. ರಾಕ್ಷಸರ ರಾಜನಾದ ರಾವಣನನ್ನು ವಂಚಿಸಿ ಆತ್ಮಲಿಂಗವನ್ನು ಅವನಿಂದ ದೂರ ಮಾಡಿ ಯಶಸ್ವಿಯಾದ ಗಣಪತಿಯ ಸ್ಮರಣೆಗಾಗಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಸ್ಥಳೀಯರ ನಂಬಿಕೆಯ ಪ್ರಕಾರ, ಭಕ್ತರು ಮಹಾಬಲೇಶ್ವರ ದೇವಸ್ಥಾನಕ್ಕೆ ಹೋಗುವ ಮೊದಲು ಮಹಾ ಗಣಪತಿ ದೇವಸ್ಥಾನ ಭೇಟಿ ನೀಡಬೇಕು. ಈ ದೇವಸ್ಥಾನ ತನ್ನ 1.3 ಮೀಟರ್ ಎತ್ತರದ ಗಣೇಶನ ಕಪ್ಪು ಕಲ್ಲಿನ ವಿಗ್ರಹದಿಂದ ಪ್ರವಾಸಿಗರಲ್ಲಿ ಪ್ರಖ್ಯಾತಿ ಹೊಂದಿದೆ. ಭಕ್ತರು ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಪ್ರಮುಖ ಕಾರಣವೇನೆಂದರೆ ಗಣೇಶನಿಗೆ ಈ ಸ್ಥಳದಲ್ಲಿ ತನ್ನ ಮೊದಲ ಗೌರವವನ್ನು ಪಿತೃವಾದ ಶಿವನು ತನ್ನ ಆಶೀರ್ವಾದಗಳೊಂದಿಗೆ ಸಲ್ಲಿಸಿದನು.