ದೇವತೆ ಉಮಾಳಿಗೆ ಮೀಸಲಾಗಿರುವ ಭದ್ರಕಾಳಿ ದೇವಾಲಯವು , ಗೋಕರ್ಣ ಪಟ್ಟಣದ ಮತ್ತೊಂದು ಜನಪ್ರಿಯ ಯಾತ್ರಾ ಆಕರ್ಷಣೆಯಾಗಿದೆ. ಪಟ್ಟಣದಿಂದ 1 ಕಿಮೀ ಅಂತರದಲ್ಲಿ ನೆಲೆಸಿರುವ ಈ ದೇವಾಲಯದ ಪ್ರಧಾನ ದೇವತೆಯನ್ನು ಗೋಕರ್ಣದ ರಕ್ಷೆ ಎಂದು ನಂಬಲಾಗಿದೆ. ಈ ದೇವಸ್ಥಾನ ಮಹಾಬಲೇಶ್ವರ ದೇವಾಲಯ ಸಂಕೀರ್ಣದ ಭಾಗವಾಗಿದೆ. ಶಿವನ ಪತ್ನಿಯಾದ ಉಮಾಳನ್ನು ರಾವಣನು ಇಲ್ಲಿ ತ್ಯೆಜಿಸಿಹೋದಾಗ, ವಿಷ್ಣುವು ಆಕೆಗೆ ಗೋಕರ್ಣದಲ್ಲಿ ಉಳಿದುಕೊಳ್ಳುವಂತೆ ಹೇಳುತ್ತಾನೆ. ಪ್ರಸ್ತುತವಾಗಿ ಗೋಕರ್ಣಕ್ಕೆ ಹೋಗುವ ಭಕ್ತರು ಉಮಾಳನ್ನು ದೇವಿ ಭದ್ರಕಾಳಿಯ ರೂಪದಲ್ಲಿ ಪ್ರಾರ್ಥಿಸುವರು. ಸಮಯ ಅನುಮತಿಸಿದರೆ, ಈ ಪಟ್ಟಣದ ಮೂಲಕ ಹಾದು ಹೋಗುವಾಗ ತಾಯಿ ಭದ್ರಕಾಳಿಗೆ ಇಲ್ಲಿನ ದೇವಾಲಯಕ್ಕೆ ಸಾಗಿ ಗೌರವಪೂರ್ವಕ ಭೇಟಿ ನೀಡುವುದು ಸೂಕ್ತ.