ನರಗುಂದ ಕೋಟೆಯು ಗದಗ ಜಿಲ್ಲೆಯಲ್ಲಿನ ಪ್ರಮುಖ ಆಕರ್ಷಣೆಯ ಕೇಂದ್ರ. 1675 ರಲ್ಲಿ ಛತ್ರಪತಿ ಶಿವಾಜಿ ಕಾಲದಲ್ಲಿ ನಿರ್ಮಿಸಲ್ಪಟ್ಟ ಎರಡು ಪ್ರಮುಖ ಕೋಟೆಗಳಲ್ಲಿ ಇದೂ ಒಂದು. ಇನ್ನೊಂದು ಕೋಟೆಯೆಂದರೆ ರಾಮದುರ್ಗ ಕೋಟೆ. 1691-92 ರಲ್ಲಿ ಔರಂಗಜೇಬ ಇದನ್ನು ವಶಪಡಿಸಿಕೊಂಡ. ಆದರೆ 1706-07ರಲ್ಲಿ ಪುನಃ ರಾಮರಾವ್ ದಾದಾಜಿಯವರಿಂದ ವಶಪಡಿಸಿಕೊಳ್ಳಲ್ಪಟ್ಟಿತು. 1778 ರಲ್ಲಿ ಆ ಕಾಲದ ಮೈಸೂರು ಪ್ರಾಂತ್ಯದ ರಾಜನಾಗಿದ್ದ ಹೈದರ್ ಅಲಿ ಇದನ್ನು ವಶಪಡಿಸಿಕೊಂಡ ಹಾಗು 1784 ರಲ್ಲಿ ಟಿಪ್ಪು ಸುಲ್ತಾನ್ ಈ ಪ್ರದೇಶವನ್ನು ಆಳಿದ. 1857ರಲ್ಲಿ, ಭಾರತವನ್ನು ಆಳಿದ ಬ್ರಿಟಿಷರ ವಿರುದ್ಧ ಹೋರಾಟದ ಪ್ರಮುಖ ಕೇಂದ್ರವಾಗಿತ್ತು. ಈ ಚಳುವಳಿಯ ನೇತೃತ್ವ ವಹಿಸಿದ್ದವರು ಬಾಬಾ ಸಾಹೇಬ್ (ಭಾಸ್ಕರ್ ರಾವ್ ಭಾವೆ).