ವೆಂಕಟೇಶ್ವರ ದೇವಸ್ಥಾನವು ವೆಂಕಟೇಶ ದೇವರಿಗೆ ಅರ್ಪಿತವಾದದ್ದು. ವೆಂಕಟಾಪುರ ಎಂಬ ಸಣ್ಣ ಹಳ್ಳಿಯಲ್ಲಿ ಈ ದೇಗುಲವಿದೆ. ಐತಿಹ್ಯಗಳ ಪ್ರಕಾರ ತಿರುಪತಿಗೆ ಹೋಗಲಾಗದವರಿಗಾಗಿಯೇ ವೆಂಕಟೇಶ್ವರನು ಇಲ್ಲಿನ ಕಲ್ಲಿನ ಗುಹೆಯೊಳಗೆ ಬಂದು ಕೂಳಿತಿದ್ದ. ಗದಗಿನಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಈ ದೇವಸ್ಥಾನಕ್ಕೆ ಪ್ರವಾಸಿಗರು ಒಮ್ಮೆ ಭೇಟಿ ನೀಡಬೇಕು. ಇಲ್ಲಿ ಭೇಟಿ ನೀಡಿ ಒಮ್ಮೆ ವೆಂಕಟೇಶನ ಆಶೀರ್ವಾದವನ್ನು ಪಡೆಯಬೇಕು.