ಶಿವನಾಥ್ ನದಿಯ ದಂಡೆಯ ಮೇಲಿರುವ ಶ್ರೀ ಉವಾಸ್ಸಗ್ಗಹರಂ ಪಾರ್ಶ್ವ ತೀರ್ಥವು 1995 ರಲ್ಲಿ ನಿರ್ಮಿಸಲಾದ ಜೈನರ ಪವಿತ್ರ ದೇಗುಲವಾಗಿದೆ. ಇದರ ಪ್ರಮುಖ ಆಕರ್ಷಣೆಯೆಂದರೆ ಪಾರ್ಶ್ವನಾಥನ ಪ್ರತಿಮೆಯಿರುವ 30 ಅಡಿ ಎತ್ತರದ ಬೃಹತ್ ಬಾಗಿಲು. ಈ ಬೃಹತ್ ಪ್ರತಿಮೆಯು ನಾಲ್ಕು ಖಂಬಗಳಿಂದ ಆಶ್ರಯಿಸಲ್ಪಟ್ಟಿದೆ. ಈ ನಾಲ್ಕು ಖಂಬಗಳು ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಬೇಕಾಗಿರುವ ಬುದ್ಧಿ, ಆಂತರಿಕ ವಿಮರ್ಶೆ, ಒಳ್ಳೆಯ ನಡತೆ ಮತ್ತು ಕಠಿಣ ತಪಸ್ಸುಗಳೆಂಬ ತತ್ವಗಳನ್ನು ಸೂಚಿಸುತ್ತವೆ.
ಪ್ರವಾಸಿಗರು ಈ ಪ್ರತಿಮೆಯನ್ನು ಎರಡು ಆನೆಗಳು ಪೂಜಿಸುತ್ತಿರುವುದನ್ನು ಗಮನಿಸಬಹುದು. ಇಲ್ಲಿ ದೇವಾಲಯಗಳು, ಅತಿಥಿ ಗೃಹಗಳು, ನ್ಯಾಚುರೋಪಥಿ, ಯೋಗ ಕೇಂದ್ರ ಹಾಗು ಉದ್ಯಾನವನ್ನು ಕಾಣಬಹುದು. ಪ್ರತಿಮೆಯಿಂದ ಬೀಲುವ ಅಮಿಯಾ ಎಂಬ ಪವಿತ್ರ ನೀರನ್ನು ಇಲ್ಲಿ ಕಾಣಬಹುದು. ಪೂರ್ಣಿಮೆಯಂದ ಬಹು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.